ನಮ್ಮ
ಎಲ್ಲಾ ಘತಿಸಿದ ನಾಯಕ ಶ್ರೇಷ್ಠರಿಗೆ ಸಮಾಧಿಯಿದೆ. ಎಕರೆಗಟ್ಟಲೆ ಸ್ಥಳದಲ್ಲಿ
ನಿರ್ಮಿಸಲಾದ ಭವ್ಯ ಅಮೃತ ಶಿಲೆಯ ಗೊರಿಯಿದೆ. ಕಾಲಾಂತರದಲ್ಲಿ ಆ ಸಮಾದಿಗಳು ಯಾತ್ರಾ ಹಾಗೂ
ಪ್ರವಾಸೋದ್ಯಮ ಸ್ಥಳಗಳಾಗಿವೆ. ಮಹಾತ್ಮ ಗಾಂಧೀ-ರಾಜ್ ಘಾಟ್, ನೆಹರು-ಶಾಂತಿ ವನ,
ಇಂದಿರಾ ಗಾಂಧೀ-ಶಕ್ತಿ ಸ್ಥಳ, ಲಾಲ್ ಬಹಾದ್ದೂರ್ ಶಾಸ್ತ್ರಿ-ವಿಜಯ್ ಘಾಟ್, ಸ್ವತಂತ್ರ
ಬಂದ ನಂತರ ನಮ್ಮ ನೇತಾಗಳಾದ ರಾಜೀವ್ ಗಾಂಧೀ-ವೀರಭೂಮಿ, ಗುಲ್ಜಾರಿಲಾಲ್ ನಂದ-ನರೇನ್
ಘಾಟ್, ಇವರುಗಳ ಮದ್ಯೆ ಒಂದು ತುಂಡು ನೆಲವೂ ಸಮಾಧಿ ಸ್ಥಳವಾಗಿ ಹೊಂದದ
ಭಾರತದ ಉಕ್ಕಿನ ಮನುಷ್ಯ ಪಟೇಲರು. ಅವರನ್ನು ಅವರ ನೆನಪುಗಳನ್ನು ರಾಜಕೀಯವಾಗಿ
ನೇಪಥ್ಯಕ್ಕೆ ಸರಿಸುವ ಕ್ರಮಬದ್ದ ಯೋಜನೆ ಕಾಂಗ್ರೆಸ್ಸ್ ಸಾಧಿಸಿದೆ. ಭಾರತ ಎಂದರೆ ಅದು
ಕೇವಲ ನೆಹರು ವಂಶ ಮಾತ್ರ ಎನ್ನುವ ನಮ್ಮ ನಾಯಕರಿಗೆ ಪಟೇಲರ ಮೊನಚು ಮಾತುಗಳಾಗಲಿ,
ಮಾತೃಭೂಮಿಯ ಭಗೆಗಿನ ದಿವ್ಯ ಕಾಳಜಿಯಾಗಲಿ ಅಥವಾ ನಿಸ್ವಾರ್ಥ ದೇಶ ಭಕ್ತಿಯಾಗಲಿ ಎಂದಿಗೆ
ಅರ್ಥವಾದೀತು? ರಾಷ್ಟ್ರದ ವಿಲೀನಿಕರಣ ಮತ್ತು ಭಾಷಾವಾರು ಪ್ರಾಂತ್ಯಗಳ ರಚನೆಯ ಹಿಂದಿದ್ದ
ಪಟೇಲರ ಅವಿರತ ಶ್ರಮ ಹಾಗೂ ಕಾಶ್ಮೀರದ ಹರಿಸಿಂಗ್ ವಿಚಾರದಲ್ಲಿ ಅವರು ತೆಗೆದುಕೊಂಡ
ದಿಟ್ಟ ನಿರ್ಧಾರ ಸದಾ ಸ್ಮರಣೀಯ. ಭಾರತೀಯನಾದವನು ಎಂದಿಗೂ ಪಟೇಲರನ್ನು ಮರೆಯಭಾರದು.
ಮತ್ತೆ ಹುಟ್ಟಿ ಬರಲಿ ಪಟೇಲರು ತಾಯಿ ಭಾರತಿಯ ಉದರದಲ್ಲಿ.
-ವಿಪ್ರವಿಶ್ವತ್(ವಿಶ್ವಾಸ್ ಭಾರದ್ವಾಜ್)
(31 ಅಕ್ಟೋಬರ್ 2012ರಂದು ಬರೆದಿದ್ದ ಕಿರು ಲೇಖನ-ಸರ್ದಾರ್ ಪಟೇಲರ ವ್ಯೆಕ್ತಿತ್ವ ಹಾಗೂ ಬಿರುಸುತನ ಕೆಲವು ದಿನ ನನ್ನ ಇಂಟರೆಸ್ಟಿಂಗ್ ಸಬ್ಜೆಕ್ಟ್ ಆಗಿತ್ತು)
No comments:
Post a Comment