ಬಹಳ ಮಂದಿ ಹೇಳಿದ್ದರು
" ಸ್ವತಃ ಬೈರಪ್ಪನವರೇ ಓದಿ ಮೆಚ್ಚಿದ್ದಾರಂತೆ, ಒಂದ್
ಸಲ ಕರ್ಮ ಓದು" ಅಂತ..
ಕಾರಣಾಂತರಗಳಿಂದ
ಸಾಧ್ಯವಾಗಿರಲಿಲ್ಲ..ಮೊನ್ನೆ ಬಿಬಿಸಿಯಲ್ಲಿ ವಾಸವಿಗೆ
ಹೇಳಿದೆ ಕರ್ಮ ಕೊಳ್ಳೋಕೆ..ಅವಳು
ಖರೀದಿಸಿದ್ರೆ ಅದು ನಾನು ಖರೀದಿಸಿದ
ಹಾಗೆಯೆ..
ತಕ್ಷಣ ಓದಲು ಕುಳಿತೆ ಎರಡೇ
ದಿನಕ್ಕೆ ಮುಗಿದು ಹೋಯ್ತು..ಪುಸ್ತಕದ
ಹಾಳೆಗಳು ಮುಗಿದಿವೆ ಆದ್ರೆ ಹ್ಯಾಂಗ್ ಓವರ್..?
ಪ್ರಾಯಶಃ ಅದು ಸದ್ಯಕ್ಕೆ ಮುಗಿಯುವಂತದ್ದಲ್ಲ..
ನಾನಾಗ ಪ್ರಥಮ ವರ್ಷದ ಪದವಿ
ಓದ್ತಾ ಇದ್ದೆ..ಸಾವಿನ ನಂತರದ
15 ದಿನಗಳ ಕಾಲ ಆತ್ಮ ಇಲ್ಲೇ
ಇರುತ್ತೆ ಅನ್ನುವ ಆಧಾರದ ಮೇಲೆ
"ಆತ್ಮ ಮುಕ್ತ" ಅಂತ ಸಣ್ಣ ಕಥೆಯೊಂದನ್ನು
ಬರೆದಿದ್ದೆ..ಅದು ಶಿವಮೊಗ್ಗದ ಸೃಷ್ಟಿ
ರಾಜ್ ಟೈಮ್ಸ್ನಲ್ಲಿ ಪ್ರಕಟವಾಗಿತ್ತು..
ಕರ್ಮ ಓದಿದ ಮೇಲೆ ಮೊದಲು
ಕಾಡಿದ ಭಾವವೇ ಅದು..ಇಂಥ
ಪ್ರಯತ್ನ ನಾನೇಕೆ ಮಾಡ್ಲಿಲ್ಲ..? ಆ
ಸಬ್ಜೆಕ್ಟ್ ಬಹಳ ಕಾಲದಿಂದ ನನ್ನ
ತಿವೀತಾ ಇತ್ತು..ನಿಜ ಈಗ
ಪಶ್ಚಾತ್ತಾಪ ಆಗ್ತಿದೆ..(ಕರಣಂ ಪವನ್ ಪ್ರಸಾದ್
ಬಗ್ಗೆ ಒಂಚೂರು ಜಲಸ್ ಕೂಡಾ)
ಆದ್ರೆ ಒಂದು ವೇಳೆ ನಾನೇ
ಈ ಪ್ರಯತ್ನ ಮಾಡಿದ್ರೂ
ಕರಣಂ ಪವನ್ ಪ್ರಸಾದ್ರ
ಶ್ರದ್ಧೆ ನಂಗೆ ಇರ್ತಾ ಇತ್ತೋ
ಇಲ್ವೋ..? ಅವರಷ್ಟು ಹೋಂ ವರ್ಕ್
ಖಂಡಿತಾ ನಾನು ಮಾಡ್ತಾ ಇರ್ಲಿಲ್ಲ..
ಕರ್ಮ ಅದ್ಭುತವಾಗಿದೆ..ಶ್ರದ್ಧೇ ಹಾಗೂ ನಂಬಿಕೆಗಳ
ನಡುವಿನ ಸೂಕ್ಷ್ಮ ಸಂವೇಧನೆಯನ್ನು, ತಲ್ಲಣಗಳ
ಮೂಲಕ ಬಹಿರಂಗ ಪಡಿಸಿದ್ದಾರೆ..ನಮ್ಮೆಲ್ಲರಲ್ಲೂ
ಒಬ್ಬ ಸುರೇಂದ್ರ ಖಂಡಿತಾ ಇದ್ದಾನೆ..ಯಾಂಕಳ್ಳಿ
ವೆಂಕಟೇಶ್ ಭಟ್ಟರ ಶ್ರದ್ಧೆಯ ಕುರಿತಾದ
ಸಮರ್ಥನೆ ಓದಿನ ಲಯಕ್ಕೆ ಇಂಬು
ಕೊಡುತ್ತದೆ..ಕರ್ಮ ಓದಿಸಿಕೊಂಡು ಹೋಗುತ್ತೆ.
ಕರ್ಮ ಕಾದಂಬರಿಯೊಳಗೇ ಪುರುಷೋತ್ತಮ ಪ್ರದರ್ಶಿಸುವ "ಎಲೈ ಗರುಡ" ನಾಟಕ
ಕರ್ಮದ ಸಾರಾಂಶವನ್ನು ಕೆಲವೇ ಅಕ್ಷರಗಳಲ್ಲಿ ಸರಳೀಕರಿಸುತ್ತೆ..
ಕುಮಾರ್
ಮಾವ ನಿಜಕ್ಕೂ ಇಂಟರೆಸ್ಟಿಂಗ್ ಕ್ಯಾರೆಕ್ಟರ್..ವಾಣಿಯ ಸ್ನಿಗ್ದ ಸೌಂದರ್ಯ
ಚೆನ್ನಾಗಿ ವರ್ಣನೆಯಾಗಿದೆ..ಜೊತೆಗೆ ಸುರೇಂದ್ರನ ತೊಳಲಾಟ
ಕೂಡಾ..
ಸೈಲೆಂಟ್
ಕ್ಯಾರೆಕ್ಟರ್ ಸುಬ್ಬು ಮಾವ ಹಾಗೂ
ಸುರೇಶರ ಬಗ್ಗೆ ಗೌರವ ಮೂಡುತ್ತೆ..ಮಲೆನಾಡಿನ ಮಂದಿಗೆ ಕರ್ಮ ಸ್ವಂತಿಕೆಯ
ಭಾವ ಮೂಡಿಸುತ್ತೆ..
ಜೆನೆಟಿಕ್
ಸೈನ್ಸ್ ಸ್ವಭಾವ ಹಾಗೂ ವ್ಯಕ್ತಿತ್ವ
ನಿರ್ಮಾಣಕ್ಕೆ ಹೇಗೆ ಮುಖ್ಯ ಅನ್ನೋದು
ನರಹರಿ ಹಾಗೂ ಸುರೇಂದ್ರನ ಸ್ವಭಾವಗಳಿಂದ
ಸಾಬೀತಾಗುತ್ತೆ..
ಶಾರದಮ್ಮನವರ
ಕೌಟುಂಬಿಕ ಅನ್ಯೂನ್ಯತೆ..ಶ್ರೀಕಂಠ ಜೋಯಿಸರ ಗಂಭೀರ
ಅಹಂಕಾರ..ನರಹರಿಯ ಮುಗ್ದತೆ..ನೇಹಾ
ಜೀವಂತಿಯ ದಾರ್ಷ್ಟತೆಗಳು ಕರ್ಮದ ಪಾತ್ರ ವರ್ಗವನ್ನು
ಅತ್ಯಂತ ಶ್ರೀಮಂತಗೊಳಿಸಿವೆ..
ಆದ್ರೆ ಬೈರಪ್ಪನವರಂತೆ ಕರಣಂ ಪ್ರಸಾದ್ ಸಹ
ದ್ವಂದ್ವ ಅಂತ್ಯ ಸಿದ್ಧಾಂತಕ್ಕೆ ಜೋತು
ಬಿದ್ರೇನೋ ಅನ್ನಿಸುತ್ತೆ..ಕನ್ಕ್ಲೂಷನ್ ಓದುಗರೇ
ಕೊಡಲಿ ಅನ್ನುವ ಬೈರಪ್ಪನವರ ದಾಟಿಯೇ
ಪ್ರಸಾದ್ ಅನುಸರಿಸಿದ್ದಾರೆ..
ಅದರ ಬದಲು ನೇಹಾ ಜೀವಂತಿಗೂ
ಹಿಂದೂ ಸಂಸ್ಕ್ರತಿಯ ಅಪರ ಕರ್ಮ ಅಥವಾ
ಶ್ರಾದ್ಧದ ಬಗೆಗಿನ ನಿಲುವು ಬದಲಾಯಿಸಿದ್ದರೆ
ಒಂದಷ್ಟು ರೋಚಕತೆ ಇರ್ತಿತ್ತೇನೋ ಅನ್ನೋದು
ನನ್ನ ಅಭಿಪ್ರಾಯ..
ಉಳಿದಂತೆ
ಕರ್ಮ ಈಸ್ ವಂಡರ್ಫುಲ್..
ಓದದೇ ಇದ್ರೆ ಖಂಡಿತಾ ಓದಿ..
-ವಿಶ್ವಾಸ್
ಭಾರದ್ವಾಜ್
No comments:
Post a Comment