Wednesday 10 December 2014

ನನ್ನತನ

ಯಾವ ಮಹಾಸಾಗರದೊಡಲ ಸುನಾಮಿಗಂಜಲಾರೆ
ಬಿರುಗಾಳಿ ಭೋರ್ಗರೆತಗಳ ಓಘಕೆದೆಗುಂದಲಾರೆ
ಸಿಡಿಲಬ್ಬರದ ಮೊರೆತಗಳಿಗೆ ತಲ್ಲಣಿಸಲಾರೆ
ಅಗ್ನಿವರ್ಷದ ಉಷ್ಣಧಾರೆಯ ಹಬೆಗೆ ಕರಗಲಾರೆ
ಕಾಳಿಂಗ ಕಾರ್ಕೋಟಕ ವಿಷಕೆ ಹೆಪ್ಪುಗಟ್ಟಲಾರೆ
ಬೆನ್ನತ್ತಿ ಬರುವ ಜ್ವಾಲಾಮುಖಿಯ ಲಾವಾರಸ ಭೀತಿಗೆ
ಕಂಪಿಸಲಾರೆ
ದಯ್ಯ ಅಸುರ ಪೆಡಂಭೂತ ಬ್ರಹ್ಮರಾಕ್ಷಸ ಪಿಶಾಚಿ ನಿಶಾತಗಣದ ರಣಕೇಕೆಗೆ ಭಯಬಿದ್ದು
ಪರಾಕು ಪಂಪನು ಊದಲಾರೆ
ನಾ ಅಚಲ ಚಿತ್ತ ಚಿನ್ಮಯಾತ್ಮ ದೃಢ ವಿಶ್ವರೂಪ ಚೇತನ
ಎನ್ನ ತನ ಸದಾ ಹರಿವ ಅನಂತ ಜೀವವಾಯು ಅನುಚಣ
-ವಿಶ್ವಾಸ್ ಭಾರದ್ವಾಜ್

No comments:

Post a Comment