ಯಾವ ಮಹಾಸಾಗರದೊಡಲ ಸುನಾಮಿಗಂಜಲಾರೆ
ಬಿರುಗಾಳಿ ಭೋರ್ಗರೆತಗಳ ಓಘಕೆದೆಗುಂದಲಾರೆ
ಸಿಡಿಲಬ್ಬರದ ಮೊರೆತಗಳಿಗೆ ತಲ್ಲಣಿಸಲಾರೆ
ಅಗ್ನಿವರ್ಷದ ಉಷ್ಣಧಾರೆಯ ಹಬೆಗೆ ಕರಗಲಾರೆ
ಕಾಳಿಂಗ ಕಾರ್ಕೋಟಕ ವಿಷಕೆ ಹೆಪ್ಪುಗಟ್ಟಲಾರೆ
ಬೆನ್ನತ್ತಿ ಬರುವ ಜ್ವಾಲಾಮುಖಿಯ ಲಾವಾರಸ ಭೀತಿಗೆ
ಕಂಪಿಸಲಾರೆ
ದಯ್ಯ ಅಸುರ ಪೆಡಂಭೂತ ಬ್ರಹ್ಮರಾಕ್ಷಸ ಪಿಶಾಚಿ ನಿಶಾತಗಣದ ರಣಕೇಕೆಗೆ ಭಯಬಿದ್ದು
ಪರಾಕು ಪಂಪನು ಊದಲಾರೆ
ನಾ ಅಚಲ ಚಿತ್ತ ಚಿನ್ಮಯಾತ್ಮ ದೃಢ ವಿಶ್ವರೂಪ ಚೇತನ
ಎನ್ನ ತನ ಸದಾ ಹರಿವ ಅನಂತ ಜೀವವಾಯು ಅನುಚಣ
-ವಿಶ್ವಾಸ್ ಭಾರದ್ವಾಜ್
ಬಿರುಗಾಳಿ ಭೋರ್ಗರೆತಗಳ ಓಘಕೆದೆಗುಂದಲಾರೆ
ಸಿಡಿಲಬ್ಬರದ ಮೊರೆತಗಳಿಗೆ ತಲ್ಲಣಿಸಲಾರೆ
ಅಗ್ನಿವರ್ಷದ ಉಷ್ಣಧಾರೆಯ ಹಬೆಗೆ ಕರಗಲಾರೆ
ಕಾಳಿಂಗ ಕಾರ್ಕೋಟಕ ವಿಷಕೆ ಹೆಪ್ಪುಗಟ್ಟಲಾರೆ
ಬೆನ್ನತ್ತಿ ಬರುವ ಜ್ವಾಲಾಮುಖಿಯ ಲಾವಾರಸ ಭೀತಿಗೆ
ಕಂಪಿಸಲಾರೆ
ದಯ್ಯ ಅಸುರ ಪೆಡಂಭೂತ ಬ್ರಹ್ಮರಾಕ್ಷಸ ಪಿಶಾಚಿ ನಿಶಾತಗಣದ ರಣಕೇಕೆಗೆ ಭಯಬಿದ್ದು
ಪರಾಕು ಪಂಪನು ಊದಲಾರೆ
ನಾ ಅಚಲ ಚಿತ್ತ ಚಿನ್ಮಯಾತ್ಮ ದೃಢ ವಿಶ್ವರೂಪ ಚೇತನ
ಎನ್ನ ತನ ಸದಾ ಹರಿವ ಅನಂತ ಜೀವವಾಯು ಅನುಚಣ
-ವಿಶ್ವಾಸ್ ಭಾರದ್ವಾಜ್
No comments:
Post a Comment