Tuesday 30 December 2014

ಬೆಂಗಾಡು

ಬೆಂಗಾಡು ನೋಡು ಇದು; ಕಾಂಬ ಬಯಲುದೊರೆಗಿಲ್ಲ ಆದಿ-ಅಂತ್ಯ;
ಅಡಿಗರ ಪದ್ಯವೊಂದು ಬಾಯಲ್ಲಿ ಉಲಿಯಿತು..ಆ ಸಂದರ್ಭ ಅದಕ್ಕೆ ಸೂಕ್ತವಾಗಿತ್ತು.. ಬಯಲು ಸೀಮೆಯ ಬಟಾಬಯಲಿನಲ್ಲಿ ಮಧ್ಯೆ ಬಿಳಿ ತಿರುಗಿದ ವೃದ್ಧೆಯ ಬೈತಲೆಯಂತೆ ಆ ರಸ್ತೆ ಹಾದು ಹೋಗಿತ್ತು.. 
ಆದಿ-ಅಂತ್ಯವೇ ಇಲ್ಲದೆ ಕಾಲು ಚಾಚಿ ಶಯನಾವಸ್ಥೆಯಲ್ಲಿದ್ದ ಆ ಬೆಂಗಾಡಿನ ಬಯಲುದೊರೆ,, ಅರ್ಥಾರ್ಥಗಳೇನೇ ಇರಲಿ ಅಡಿಗರ ಉಪಮೆ ಈ ಬಯಲುರಸ್ತೆ ಹಾಗೂ ಸುಡುವ ಬೆಂಕಿಯಂತ ಬೆಂಗಾಡಿಗೆ ಹೋಲಿಕೆಯಾಗಿತ್ತು.. ಸುತ್ತ ಮುತ್ತ ಎಷ್ಟೇ ದೂರ ಕಣ್ಣು ಹಾಯಿಸಿದ್ರೂ ಒಂದೇ ಒಂದು ಸಣ್ಣ ಮರವಿರಲಿಲ್ಲ.. 
ಅಲ್ಲಿ ಟಾರ್ ಕಿತ್ತು ಹೋದ ರೋಡ್ ಶತಮಾನಗಳಿಂದ ಯಾರ ಮಾತಿಗೂ ಕಿವಿಯಾಗದೆ, ಯಾರ ಕಿವಿಗೂ ಧ್ವನಿಯಾಗದೆ, ಯಾರ ಪ್ರತಿಕ್ರಿಯೆಗಳಿಗೂ ಮರು ಪ್ರತಿಕ್ರಿಯೆ ನೀಡದೆ ಜಡವಾಗಿ ಬಿದ್ದ ಕುಷ್ಟ ರೋಗಿಯಂತ ಬಿಳುಚಿಕೊಂಡು ಬೋರ್ಗಾಳಿಗೆ ನೋಡು ಇದು; ಕಾಂಬ ಬಯಲುದೊರೆಗಿಲ್ಲ ಆದಿ-ಅಂತ್ಯ;
ಅಡಿಗರ ಪದ್ಯವೊಂದು ಬಾಯಲ್ಲಿ ಉಲಿಯಿತು..ಆ ಸಂದರ್ಭ ಅದಕ್ಕೆ ಸೂಕ್ತವಾಗಿತ್ತು.. ಬಯಲು ಸೀಮೆಯ ಬಟಾಬಯಲಿನಲ್ಲಿ ಮಧ್ಯೆ ಬಿಳಿ ತಿರುಗಿದ ವೃದ್ಧೆಯ ಬೈತಲೆಯಂತೆ ಆ ರಸ್ತೆ ಹಾದು ಹೋಗಿತ್ತು..
ಆದಿ-ಅಂತ್ಯವೇ ಇಲ್ಲದೆ ಕಾಲು ಚಾಚಿ ಶಯನಾವಸ್ಥೆಯಲ್ಲಿದ್ದ ಆ ಬೆಂಗಾಡಿನ ಬಯಲುದೊರೆ,, ಅರ್ಥಾರ್ಥಗಳೇನೇ ಇರಲಿ ಅಡಿಗರ ಉಪಮೆ ಈ ಬಯಲುರಸ್ತೆ ಹಾಗೂ ಸುಡುವ ಬೆಂಕಿಯಂತ ಬೆಂಗಾಡಿಗೆ ಹೋಲಿಕೆಯಾಗಿತ್ತು.. ಸುತ್ತ ಮುತ್ತ ಎಷ್ಟೇ ದೂರ ಕಣ್ಣು ಹಾಯಿಸಿದ್ರೂ ಒಂದೇ ಒಂದು ಸಣ್ಣ ಮರವಿರಲಿಲ್ಲ..
ಅಲ್ಲಿ ಟಾರ್ ಕಿತ್ತು ಹೋದ ರೋಡ್ ಶತಮಾನಗಳಿಂದ ಯಾರ ಮಾತಿಗೂ ಕಿವಿಯಾಗದೆ, ಯಾರ ಕಿವಿಗೂ ಧ್ವನಿಯಾಗದೆ, ಯಾರ ಪ್ರತಿಕ್ರಿಯೆಗಳಿಗೂ ಮರು ಪ್ರತಿಕ್ರಿಯೆ ನೀಡದೆ ಜಡವಾಗಿ ಬಿದ್ದ ಕುಷ್ಟ ರೋಗಿಯಂತ ಬಿಳುಚಿಕೊಂಡು ಬೋರ್ಗಾಳಿಗೆ ಧೂಳು ಹಾಯಿಸುತ್ತಾ ಮಲಗಿತ್ತು..
ಒಂದೇ ಬಸ್ಸು ಈ ರಸ್ತೆಯಲ್ಲಿ ದಿನಕ್ಕೆ ದಿನಕ್ಕೆ ನಾಲ್ಕು ಬಾರಿ ಓಡಾಡುತ್ತದೆ ಅಂತ ಕಟ್ಟಿಗೆ ಹೊರೆ ಹೊತ್ತಿದ್ದ ವೃದ್ಧ ಹೇಳಿದ್ದ..
ಯಾವುದೋ ಅಸೈನ್ಮೆಂಟ್ ಮೇಲೆ ಆ ಕುಗ್ರಾಮಕ್ಕೆ ತೆರಳಿದ್ದ ನನಗೆ ಅಲ್ಲಿನ ಸಾಗದೆ ಇದ್ದ ಕಾಲ ಕ್ಷಣಕ್ಷಣಕ್ಕೂ ದಿವ್ಯ ಅಸಮಧಾನ ಹುಟ್ಟುಹಾಕುತ್ತಿತ್ತು.. ನೀರವ ಮೌನ ಅಸಹನೀಯವಾಗಿತ್ತು.. ಇದ್ಯಾವ ದರಿದ್ರ ಊರಿಗೆ ಬಂದು ಸಿಕ್ಕಂಬಿದ್ದೆ ಅಂತ ನನಗೆ ನಾನೇ ಹತ್ತಾರು ಸಲ ಬಯ್ದುಕೊಂಡಿದ್ದೆ.. ಬಸ್ಸು, ಕಾರು, ಬೈಕುಗಳು ಒತ್ತಟ್ಟಿಗಿರಲಿ ಕೊನೆಗೆ ಮನುಷ್ಯ ಪ್ರಾಣಿಯ ಹೆಜ್ಜೆ ಸದ್ದು ಕೇಳದಷ್ಟು ಕುಗ್ರಾಮವದು..
ಊರಿನಿಂದ ನಾಲ್ಕು ಕಿಮೀ ಬಿಸಿಲ ರಣ ಬಯಲಿನಲ್ಲಿ ನಡೆದು ಬಂದೇ ಈ ಸೋ ಕಾಲ್ಡ್ ಮೈನ್ ರೋಡ್ ಗೆ ತಾಕಿಕೊಳ್ಳಬೇಕಿತ್ತು.. "ವತ್ತಾರೆದು ಪಸ್ಟ್ ಬಸ್ಸು ಹೊಂಟೋಯ್ತು.. ಎಲ್ಡ್ ನೇದು ಈಗ ಬತ್ತದೆ.. ನೀವ್ ದಪ ದಪ ನಡುದ್ರೆ ಸಿಕ್ರೂ ಸಿಕ್ ಬೈದು" ಅಂತ ಹೇಳಿದ್ದ ಅದೇ ಮುದುಕ
ಅಷ್ಟರಲ್ಲಿ...
ದೂರದಲ್ಲೆಲ್ಲೋ ಮೋಟಾರ್ ಸದ್ದು ಕೇಳಿತು.. ಧೂಳೆದ್ದ ರಸ್ತೆಯಲ್ಲಿ ಬರುತ್ತಿರುವ ವಾಹನದ ರೂಪ ಅಸ್ಪಷ್ಟವಾಗಿತ್ತು.. "ಸಾಮಿ ಬಸ್ಸು ತುಂಬ್ ಕ್ಯಂಡಿದ್ರೆ ನಿಲ್ಸಕಿಲ್ಲ.. ಅಡ್ಡಡ್ಡಾಗಿ ನಿಂತ್ ಕ್ಯಂಬುಡ್ರಿ" ಅಂದಿದ್ದ ಆ ಮುದುಕ..
ಅಸಲಿಗೆ ಬರುತ್ತಿರೋದು ಬಸ್ಸು ಹೌದಾ? ಆಗಸಮುಖಿಯಾಗಿ ಏಳುತ್ತಿದ್ದ ಧೂಳಿನ ಬ್ರಹ್ಮರಾಕ್ಷಸನ ನರ್ತನದಿಂದ ಮಬ್ಬಾಗಿ ಕಾಣಿಸುತ್ತಿದ್ದ ಆ ದಿಕ್ಕಿನಲ್ಲಿ ಏನಂದರೆ ಏನೂ ಕಾಣಿಸುತ್ತಲೇ ಇರಲಿಲ್ಲ.. ಅಸ್ಪಷ್ಟ ಶಭ್ದದ ಹೊರತೂ ಮತ್ತೇನೂ ಅಂದಾಜಿಸಲೂ ಸಾಧ್ಯವಿರಲಿಲ್ಲ..
ಒಂದು ವೇಳೆ ಈ ಬಸ್ಸು ನಿಲ್ಲಿಸದೇ ಇದ್ದರೇ ಮುಂದಿನ ಬಸ್ಸಿಗೆ ಕಾಯುವ ಕೊಂಚ ಮಾತ್ರದ ಸೈರಣೆಯೂ ನನ್ನಲ್ಲಿ ಇರಲಿಲ್ಲ.. ಆದದ್ದಾಗಲಿ ಅಡ್ಡ ನಿಂತೇ ಬಿಡೋಣ ಅಂದುಕೊಂಡು ಕಣ್ಣಿಗೆ ಗ್ಲಾಸ್ ಏರಿಸಿ ರಸ್ತೆ ಅನ್ನಿಸಿಕೊಂಡ ಪಟ್ಟೆಯ ಮಧ್ಯೆ ನಿಂತೆ..
ಹಾಕಿದ್ದ ಬಿಳಿಯ ಟೀ ಶರ್ಟ್ ಕ್ಷಣಾರ್ಧದಲ್ಲಿ ತನ್ನ ಬಣ್ಣ ಬದಲಿಸಿಕೊಂಡು ಹೋಳಿಯಾಡಿದ ಮುಖದಂತೆ ಕೆಂಪಾಗಿಬಿಟ್ಟಿತ್ತು..
ಶಬ್ದ ಹತ್ತಿರವಾಗತೊಡಗಿತ್ತು.. ನಿಧಾನವಾಗಿ ಅಸ್ಪಷ್ಟವಾಗಿದ್ದು ಸ್ಪಷ್ಟವಾಗತೊಡಗಿತ್ತು.. ಕೇಳಿದ್ದು ಮಾತ್ರವಲ್ಲದೆ ಈಗ ಕಾಣಿಸಲೂ ತೊಡಗಿತ್ತು.. ಹತ್ತಿರ ಬಂದಿದ್ದು ಬಸ್ ಅಲ್ಲ, ಅದೊಂದು ಹೆಲಿಕಾಪ್ಟರ್ ನೆಲದಿಂದ 40 ಅಡಿ ಮೇಲೆ ಹಾರುತ್ತಿದ್ದ ಕಾರಣ ಧೂಳಿನ ವಿರಾಟ್ ಸ್ವರೂಪ ವಿಶ್ವರೂಪ ದರ್ಶನ ಮಾಡಿಸಿತ್ತು..
ನರನಾಡಿಗಳಲ್ಲಿ ರೋಷದ ಕಿಡಿ ಹರಿದಾಡತೊಡಗಿತ್ತು.. ಹಿಂದೆಯೇ ಬಸ್ಸೇ ಅಪರೂಪವಾದ ಈ ಊರಿನಲ್ಲಿ ಹೆಲಿಕಾಪ್ಟರ್ ಎಲ್ಲಿಂದ ಬಂತಪ್ಪ ಅನ್ನುವ ಅನುಮಾನವೂ ಹುಟ್ಟಿಕೊಂಡಿತು..
ಮೊದಲೇ ಕೆಂಪಾಗಿದ್ದ ಮುಖ ಮೈ ಬಟ್ಟೆಗಳು ಈಗ ಮತ್ತಷ್ಟು ಘೋರವಾಗಿ ಹೋಯಿತು.. ಬಂದ ಕರ್ಮ ಆದದ್ದು ಅನುಭವಿಸಲೇ ಬೇಕು ಅಂದುಕೊಂಡು ಸುಮ್ಮನೇ ರಸ್ತೆ ಬದಿಗೆ ಹೋಗಿ ನಿಂತೆ.. ರಸ್ತೆಗೆ ವಿರುದ್ಧವಾಗಿ ಮುಖ ಮಾಡಿ ನಿಂತು ಮೈ ವಸ್ತ್ರಗಳನ್ನು ಕೊಡವುತ್ತಿದ್ದಾಗಲೇ ಮತ್ತೆ ಸಣ್ಣಗೆ ಮೋಟಾರ್ ಸದ್ದು ಕೇಳಿಸಿತು..
ಈ ಅವತಾರದಲ್ಲಿ ಬಸ್ ಡ್ರೈವರ್ ನನ್ನನ್ನು ನೋಡಿದ್ರೂ ನಿಲ್ಲಿಸೋದು ಕಷ್ಟ ಅಂದುಕೊಂಡೇ ಕೈ ಮಾಡಿದೆ.. ಬರ್ರನೇ ಬಂದ ಬಸ್ಸು ಕೊಂಚ ಮುಂದೆ ಹೋಗಿ ನಿಂತುಕೊಳ್ತು.. ಅಲ್ಲಿಯವರೆಗೆ ಮನಸಿನಲ್ಲೇ ಅಸ್ತಿತ್ವದಲ್ಲಿ ಇರುವ ಎಲ್ಲಾ ಗಂಡು ಹಾಗೂ ಹೆಣ್ಣು ದೇವರುಗಳಿಗೆ ಕೈ ಮುಗಿದಿದ್ದ ನಾನು, ಅಬ್ಬಾ ಪ್ರಾರ್ಥನೆ ಫಲಿಸಿತು ಅಂತ ಬಸ್ ಏರಿದೆ..
ಏನ್ ಸಾರ್ ನಿಮ್ಮ ಅವತಾರ ಅಂದ ಡ್ರೈವರ್.. ಹೆಲಿಕಾಪ್ಟರ್ ಮಹಿಮೆ ವರ್ಣಿಸಿದೆ.. ಮುಂಡೇ ಮಕ್ಳು ಈ ಊರಿಗೊಂದು ರಸ್ತೆ ಮಾಡೋ ಯೋಗ್ಯತೆ ಇಲ್ಲ; ಈಗ ಅದೇನೋ ಫ್ಯಾಕ್ಟರಿ ಕಟ್ಟಿಸ್ತಾರಂತೆ ಅಂತ ಗೊಣಗಿದ ಡ್ರೈವರ್, ಬಸ್ ಮೂವ್ ಮಾಡಿದ..
-ವಿಶ್ವಾಸ್ ಭಾರದ್ವಾಜ್

No comments:

Post a Comment