Wednesday 10 December 2014

ಪ್ರಕ್ಷುಬ್ಧ

ಉದರದೊಳಗಡೆ ಸುಡುಸುಡು ದಹಿಸುವ ಅಗ್ನಿಪಿಂಡ
ಮಸ್ತಿಷ್ಕದಲಿ ಉರಿಯುರಿ ಲಾವಾಕಾಂಡ
ಅಣುಅಣುದಿ ಕಣಕಣದಿ ಹೂತಿಟ್ಟ ದುಗುಡ
ಹೊಸೆಹೊಸೆದು ಕಟ್ಟುತಿದೆ ಹೊಸತು ಬ್ರಹ್ಮಾಂಡ
ಅರಿ ಬಂದು ನಿಂತರೂ ಅರಿವಿಲ್ಲ ಈ ಸ್ಥಿತಿ
ಸಿದ್ದವಿಲ್ಲ ಈಟಿ ಗುರಾಣಿ ಬಿಲ್ಲು ಬತ್ತಳಿಕೆ ಕತ್ತಿ
ಪರುಶುರಾಮನ ಕೊಡಲಿಗೇಕೆ ಈ ದುರ್ಗತಿ
ಸಮರ ಸಂಕಲ್ಪ ತ್ಯೆಜಿಸಿದರೆ ಬರಿ ಪ್ರೀತಿ ಶಾಂತಿ
ಮನತೆರೆದು ಹೊರದಬ್ಬು ಈ ವ್ಯರ್ಥ ವೈಷಮ್ಯ
ಪ್ರಖರ ಪ್ರಭಾಕರನ ಉಷ್ಣ ಕಿರಣವೂ ಕ್ಷಮ್ಯ
ಹಿಡಿಶಾಪ ಹಾಕಿದರೆ ಅಪರಾಧವದು ಅಕ್ಷಮ್ಯ
ನಸುನಕ್ಕು ಕಂಡರೆ ಪರಪಂಚ ರಮ್ಯ
ಅನುಕ್ಷಣವೂ ಅನುರಣವು ಮತ್ಸರದ ಬೇಗುದಿ
ಧರೆ ಕುಸಿಯುತಿದೆ ಸಡಿಲ ಪಾಯ ತಳಹದಿ
ಅಶಾಂತ ಸಾಗರದಿ ಅಂಬಿಗರಿದ್ದರು ಕ್ರಿಸ್ತ, ಬುದ್ದ ಗಾಂಧಿ
ಎದೆ ಬಗೆದು ಕೀಳದಿದ್ದರೆ ಹಬ್ಬುವುದು ಈ ಘೋರ ವ್ಯಾಧಿ
-ವಿಶ್ವಾಸ್ ಭಾರದ್ವಾಜ್

No comments:

Post a Comment