ವಿಧ್ವಂಸಕ ನಾಯಕ:
ಅರಿಹಂತಕ ಪ್ರಳಯಾಂತಕ ಮಹಾ ಧಮನಕಾರಕ
ವಿಷವರ್ತುಲ ಜಾಲ ಹೊಸೆವ ವಿನಾಶ ಕಾಲ ಕಂಟಕ
ಅಭಯ ಹಸ್ತ ವಸ್ತ್ರ ಧರಿಸಿ ಮೆರೆವ ವಿಧ್ವಂಸಕ
ಪದ ತಳದಲೇ ಮೃತ್ಯು ಕೂಪ ಸೃಷ್ಟಿಪ ಕ್ರೂರ ಮಾಂತ್ರಿಕ
ಅರಿಹಂತಕ ಪ್ರಳಯಾಂತಕ ಮಹಾ ಧಮನಕಾರಕ
ವಿಷವರ್ತುಲ ಜಾಲ ಹೊಸೆವ ವಿನಾಶ ಕಾಲ ಕಂಟಕ
ಅಭಯ ಹಸ್ತ ವಸ್ತ್ರ ಧರಿಸಿ ಮೆರೆವ ವಿಧ್ವಂಸಕ
ಪದ ತಳದಲೇ ಮೃತ್ಯು ಕೂಪ ಸೃಷ್ಟಿಪ ಕ್ರೂರ ಮಾಂತ್ರಿಕ
ಭೂಮಂಡಲ ಚಕ್ರವರ್ತಿ ಅಹಂ ಸ್ವಯಂ ದೇವ
ಪ್ರಭೆಯ ಝಲಕು ಹೊಳೆಯುತಿರಲಿ ಝಗಮಗಿಸುವ ಠಾಃವ
ಒಪ್ಪಿಕೊಂಡು ಅಪ್ಪಿಕೊಳ್ಳು ಎನ್ನ ದಾರ್ಷ್ಟ್ರ ಇರುವ
ಪಾದುಕೆಯೋ ಹಾವಗೆಯೋ ಶಿರವೇರಿಸು ಮೂರ್ಖ
ತುಳಿತುಳಿದು ಹೂಂಕರಿಸುವೆ ಶಕ್ತಿಕೇಂದ್ರ ಆರೋಹಣ
ಆರ್ಭಟಿಸಿ ಬೊಬ್ಬಿರಿಯುವೆ ಅಧಿಕಾರವೇ ಶಿರಸ್ತ್ರಾಣ
ಚಂಡೆ-ಮದ್ದಳೆ ಬಾರಿಸುವೆ ರಾಜ ‘ಕಾರ್ಯ'ಕಾರಣ
ರಣತಾಂಡವ ಧಿಮಿ ತಿರುಗುವೆ ನಿತ್ಯ ಸಾವಿನ ನರ್ತನ
ಅಡಿಗೆರಗಿರಿ ನಾ ನಿಮ್ಮಯ ಸದಾ ಪಾದಸೇವಕ
ಜನಪದದಲೇ ಮೌಲ್ಯ ಅರಸೊ ವಿನಮ್ರ ಬಡ ಜನನಾಯಕ
ಪಾದಧೂಳಿ ಹಣೆಗೇರಿಸಿರಿ, ನಾ ಸಮಾಜ ಪಾಲಕ
ಸೊಲ್ಲೆತ್ತಿದರೇ ಜೋಕೆ..! ಭಲ್ಲೆ ಎಸೆವ ವಂಚಕ
ಚಿರಂಜೀವಿ ಮೃತ್ಯುಂಜಯ ಸಾವಿಲ್ಲದ ಅಮರಕಾಯ
ಅವತರಿಸುವ ಅನವರತ ದುಷ್ಟಕೂಟ ನಿರ್ಭಯ
ಅಂಧ ಕಾಂಚಾಣಕೂ ಮಾರ್ಗ ತೋರೋ ಅಕ್ಷಯ
ಅಧರ್ಮ ಪಥದ ಸಿದ್ಧಿ ಪಡೆದ ನಿರ್ಲಜ್ಜಿತ ಛಾಯಾ
-ವಿಶ್ವಾಸ್ ಭಾರದ್ವಾಜ್
(ಅರ್ಪಣೆ: ಖಾಸಗಿ ಮಾಧ್ಯಮವೊಂದನ್ನು ಅಧಿಕಾರದ ಮದದಿಂದ ತುಳಿದ ವಿಜಯಪತಾಕೆ ಹಾರಿಸಿದ ಘನವೆತ್ತ ಸರ್ಕಾರದ ಮಾನ್ಯ ಪ್ರಭಾವಿ ಸಚಿವರೊಬ್ಬರಿಗೆ)
ಪ್ರಭೆಯ ಝಲಕು ಹೊಳೆಯುತಿರಲಿ ಝಗಮಗಿಸುವ ಠಾಃವ
ಒಪ್ಪಿಕೊಂಡು ಅಪ್ಪಿಕೊಳ್ಳು ಎನ್ನ ದಾರ್ಷ್ಟ್ರ ಇರುವ
ಪಾದುಕೆಯೋ ಹಾವಗೆಯೋ ಶಿರವೇರಿಸು ಮೂರ್ಖ
ತುಳಿತುಳಿದು ಹೂಂಕರಿಸುವೆ ಶಕ್ತಿಕೇಂದ್ರ ಆರೋಹಣ
ಆರ್ಭಟಿಸಿ ಬೊಬ್ಬಿರಿಯುವೆ ಅಧಿಕಾರವೇ ಶಿರಸ್ತ್ರಾಣ
ಚಂಡೆ-ಮದ್ದಳೆ ಬಾರಿಸುವೆ ರಾಜ ‘ಕಾರ್ಯ'ಕಾರಣ
ರಣತಾಂಡವ ಧಿಮಿ ತಿರುಗುವೆ ನಿತ್ಯ ಸಾವಿನ ನರ್ತನ
ಅಡಿಗೆರಗಿರಿ ನಾ ನಿಮ್ಮಯ ಸದಾ ಪಾದಸೇವಕ
ಜನಪದದಲೇ ಮೌಲ್ಯ ಅರಸೊ ವಿನಮ್ರ ಬಡ ಜನನಾಯಕ
ಪಾದಧೂಳಿ ಹಣೆಗೇರಿಸಿರಿ, ನಾ ಸಮಾಜ ಪಾಲಕ
ಸೊಲ್ಲೆತ್ತಿದರೇ ಜೋಕೆ..! ಭಲ್ಲೆ ಎಸೆವ ವಂಚಕ
ಚಿರಂಜೀವಿ ಮೃತ್ಯುಂಜಯ ಸಾವಿಲ್ಲದ ಅಮರಕಾಯ
ಅವತರಿಸುವ ಅನವರತ ದುಷ್ಟಕೂಟ ನಿರ್ಭಯ
ಅಂಧ ಕಾಂಚಾಣಕೂ ಮಾರ್ಗ ತೋರೋ ಅಕ್ಷಯ
ಅಧರ್ಮ ಪಥದ ಸಿದ್ಧಿ ಪಡೆದ ನಿರ್ಲಜ್ಜಿತ ಛಾಯಾ
-ವಿಶ್ವಾಸ್ ಭಾರದ್ವಾಜ್
(ಅರ್ಪಣೆ: ಖಾಸಗಿ ಮಾಧ್ಯಮವೊಂದನ್ನು ಅಧಿಕಾರದ ಮದದಿಂದ ತುಳಿದ ವಿಜಯಪತಾಕೆ ಹಾರಿಸಿದ ಘನವೆತ್ತ ಸರ್ಕಾರದ ಮಾನ್ಯ ಪ್ರಭಾವಿ ಸಚಿವರೊಬ್ಬರಿಗೆ)
No comments:
Post a Comment