Thursday 25 December 2014

ಓ ಈಳಂ



ಶ್ರೀಲಂಕಾದಲ್ಲಿ ತಮಿಳರು ಸಿಂಹಿಳಿಯರ ನಡುವೆ ಸೌಹಾರ್ದತೆ ಮೂಡಿಸಿ ಶಾಂತಿ ಸ್ಥಾಪನೆಗೆ ಕಳಿಸಲ್ಪಟ್ಟಿದ್ದು ಶಾಂತಿ ಪಾಲನಾ ಪಡೆ INDIAN PEACE KEEPING FORCE.
ಅದನ್ನು ಕಳಿಸಿದ್ದು ಸನ್ಮಾನ್ಯ ಪ್ರಧಾನಿಗಳಾಗಿದ್ದ ರಾಜೀವ್ ಗಾಂಧಿ...
ಕಳಿಸಿದ್ದ ಉದ್ದೇಶ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಹಾಗೂ ಒಂದರ್ಥದಲ್ಲಿ ತನ್ನ ಅಂತರಾಷ್ಟ್ರೀಯ ಅಹಂಕಾರದ ತೀಟೆ ತೀರಿಸಿಕೊಳ್ಳುವ.. ಕೊನೆಯ ಅಲ್ಪ ಕಾರಣ ತಮಿಳರ ಸ್ವಾತಂತ್ರ್ಯ ಹಾಗೂ ಹಕ್ಕು ರಕ್ಷಿಸಿ ಅನ್ನುವ ಭಾರತೀಯ ತಮಿಳಿಯರ ಒತ್ತಾಯ..
ಸರಿ,, 32 ತಿಂಗಳು ಶ್ರೀಲಂಕಾದಲ್ಲಿ ಕಾರ್ಯಾಚರಣೆ ಮಾಡಿದ IPKF ಅಸಲಿಗೆ ಮಾಡಿದ್ದಾದರೂ ಏನು?
1990 ಮಾರ್ಚ್ 24 ರಂದು ತವರಿಗೆ ವಾಪಾಸಾದ ಶಾಂತಿಪಾಲನಾ ಪಡೆಯ ಸಾಧನೆಗಳು ವಾಹ್! ನಿಜಕ್ಕೂ ನಾವು ಮಾತ್ರ ಬೆನ್ನು ತುರಿಸಿಕೊಳ್ಳಲೇಬೇಕು...
ಪ್ರತಿ ದಿನವೊಂದಕ್ಕೆ 5 ಕೋಟಿಯಂತೆ ಒಟ್ಟು 4500 ಕೋಟಿ ಹಣ ವ್ಯಥಾ ವ್ಯರ್ಥ....
ರಷ್ಯಾ, ಪೋಲೆಂಡ್ ಮುಂತಾದ ರಾಷ್ಟ್ರಗಳಿಂದ ತರಿಸಲ್ಪಟ್ಟ ಅಪಾರ ಪ್ರಮಾಣದ ಮದ್ದುಗುಂಡು, ಶಸ್ತ್ರಾಸ್ತ್ರ ವಿನಾಕಾರಣ ವ್ಯರ್ಥ..
ಸುಮಾರು 1248 ಶಾಂತಿ ಪಾಲನಾ ಪಡೆಯ ಯೋಧರು, ಅಧಿಕಾರಿಗಳ ಜೀವಹಾನಿ...
3000ಕ್ಕೂ ಹೆಚ್ಚು ಸೈನಿಕರ ಅಂಗಾಂಗ ನಷ್ಟ,, ಶಾಶ್ವತ ಅಂಗವೈಕಲ್ಯ..
4000 ಲಂಕಾದ ತಮಿಳು ಹಾಗೂ ಸಿಂಹಳ ಅಮಾಯಕ ನಾಗರೀಕರ ಹತ್ಯೆ..
1 ಲಕ್ಷ ನಿರಾಶ್ರಿತರ ಹಿಡಿ ಶಾಪ, ಐವತ್ತು ಸಾವಿರ ಮನೆ ಮಠ ಕಳೆದುಕೊಂಡವರು ಮಣ್ಣು ತೂರಿ ಹರಸಿದ ಹಾರೈಕೆ..
ನೂರಾರು ಮುಗ್ಧ ಹೆಣ್ಣು ಮಕ್ಕಳ ಸಾಮೂಹಿಕ ಅತ್ಯಾಚಾರ ..
ಇಷ್ಟು ಸಾಧನೆ ಮಾಡಿ ಹಿಂತಿರುಗಿದ ಶಾಂತಿ ಪಾಲನಾ ಪಡೆ ವಾಪಾಸು ಬರುವಾಗ ಹೊತ್ತ ಹೆಸರು INDIAN PEOPLE KILLING FORCE..
ಒಮ್ಮೆ ಇತಿಹಾಸವನ್ನು ಅಮೂಲಾಗ್ರವಾಗಿ ಗಮನಿಸಿದರೆ ಎದ್ದು ಕಾಣಿಸೋದು ಕೇವಲ ರಾಜೀವ್ ಗಾಂಧಿಯವರ ಅನವಶ್ಯಕ ಅಹಂಕಾರದ ತಿಕ್ಕಲುತನ ಮಾತ್ರ..
ಮಧ್ಯ ಹಲವು ಆಯಾಮಗಳಲ್ಲಿ ಕ್ಷುಲ್ಲಕ ರಾಜಕಾರಣ ಕಾಣಿಸುತ್ತದೆ..
ಶಾಂತಿ ಸ್ಥಾಪನೆಗೆ ಹೋಗಿ ಲಂಕನ್ನರಲ್ಲಿ ಶಾಶ್ವತ ಕಂದಕ ಹುಟ್ಟು ಹಾಕಿದ ಶ್ರೇಯಸ್ಸು ರಾಜೀವ್ ಗಾಂಧಿ ಸರ್ಕಾರಕ್ಕೆ ಸಲ್ಲಬೇಕು..
ಹಾಗಿದ್ದರೂ ರಾಜೀವ್ ಗಾಂಧಿ ಭಾರತ ರತ್ನ..
ಪೋಕ್ರಾನ್ ಅಣ್ವಸ್ತ್ರ ಪರೀಕ್ಷೆ ಮೂಲಕ ದೇಶವನ್ನು ಭದ್ರಪಡಿಸಿದ, ವಿದೇಶಾಂಗ ಸಂಬಂಧ ಸುಧಾರಿಸಿದ, ಸುವ್ಯವಸ್ಥಿತ ಆಡಳಿತ ನೀಡಿದ, ಕಾರ್ಗಿಲ್ ಯುದ್ಧದ ಮುಖಾಂತರ ಪಾಪಿ ಪಾಕ್ ಗೆ ಪೆಟ್ಟು ಕೊಟ್ಟ, ಜೈ ವಿಜ್ಞಾನ್ ಅನ್ನುವ ಹೊಸ ದೃಕ್ಪಥ ತೋರಿಸಿದ ನಿಸ್ವಾರ್ಥ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರಿಗೆ ಭಾರತ ರತ್ನ ನೀಡಲು ಮೀನಾ ಮೇಷ ಎಣಿಸಬೇಕಾಯಿತು..
ಓದಲೇಬೇಕಾದ ಪುಸ್ತಕ ಕುಮಾರ್ ಬುರಡಿಕಟ್ಟೆಯವರ ಓ ಈಳಂ..
-ವಿಶ್ವಾಸ್ ಭಾರದ್ವಾಜ್

No comments:

Post a Comment