Wednesday 28 January 2015

ಗಣತಂತ್ರ ಸಂಭ್ರಮ

ಇಂದು ನಮ್ಮ ಭವ್ಯ ಭಾರತ ದೇಶಕ್ಕೆ 65ನೇ ಗಣತಂತ್ರ ದಿನದ ಸಂಭ್ರಮ.. ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ಶಕ್ತಿಯಾಗಿ ದೈತ್ಯ ಬೆಳವಣಿಗೆ ಸಾಧಿಸಿರುವ ಭಾರತದ ಸಂವಿಧಾನದ ಶ್ರೇಷ್ಟತೆ ಹಾಗೂ ಆಡಳಿತದ ತರ್ಕಬದ್ದ ನೀತಿಗೆ ಅದರದ್ದೇ ಆದ ಘನತೆ ಗಾಂಭೀರ್ಯತೆಗಳಿವೆ.. ಭಾರತೀಯರ ಎರಡನೇ ದೊಡ್ಡ ರಾಷ್ಟ್ರೀಯ ಹಬ್ಬದ ಮಹತ್ವ ಸಾರುವ ಸುಕೃತದ ದಿನವಿಂದು..
***
ಭಾರತ ವಿಶ್ವ ಆಡಳಿತ ಹಾಗೂ ರಾಜಕೀಯದ ಮೂರನೆಯ ಬೃಹತ್ ಶಕ್ತಿ.. ಭಾರತದಲ್ಲಿ ಬಂಡವಾಳ ಶಾಹಿ ಹಾಗೂ ಸಮಾಜವಾದ ಎರಡಕ್ಕೂ ಅಸ್ಥಿತ್ವವಿದೆ.. ಇವೆರಡೂ ಮಿಳಿತಗೊಂಡ ಮಿಶ್ರ ಆರ್ಥಿಕ ವ್ಯವಸ್ಥೆ ಇಲ್ಲಿನ ಅಭಿವೃದ್ಧಿ ಪಥದ ಅಡಿಗಲ್ಲು.. ಹಾಗೆ ಒಂದು ಗಟ್ಟಿ ಆರ್ಥಿಕ ವ್ಯವಸ್ಥೆಗೆ ಸೌಲತ್ತು ಒದಗಿಸಿದ್ದು ಭಾರತೀಯ ಪ್ರಜಾಸತ್ತಾತ್ಮಕ ವ್ಯವಸ್ಥೆ..ಅಂತದ್ದೊಂದು ಪ್ರಬಲ ಸಂವಿಧಾನಿಕ ಕಾಯ್ದೆ ಕಾನೂನು ಹಾಗೂ ಆಡಳಿತ ವ್ಯವಸ್ಥೆ ಜಾರಿಗೆ ಬಂದ ಮಹತ್ವದ ದಿನವೇ 26 ಜನವರಿಯ ಗಣರಾಜ್ಯೋತ್ಸವ..
***
ಭಾರತದ ಸಂವಿಧಾನ ಹಲವು ಸುತ್ತು ಪರಾಮರ್ಶೆಗೆ ಒಳಪಟ್ಟಿದೆ.. ಆಗಸ್ಟ್ ೧೫ ,೧೯೪೭ರಂದು ಭಾರತ ಸ್ವತಂತ್ರವಾದ ನಂತರ ಆಗಸ್ಟ್ ೨೯ರಂದು ಡಾ. ಅಂಬೇಡ್ಕರ್ ನೇತೃತ್ವದಲ್ಲಿ ಕರಡು ಸಮಿತಿ ನೇಮಕಾತಿ ಮಾಡಲಾಯಿತು.. ಈ ಸಮಿತಿಯು ಸಂವಿಧಾನದ ಕರಡು ಪ್ರತಿಯನ್ನು ತಯಾರಿಸಿ,ನವೆಂಬರ್ ೪, ೧೯೪೭ರಂದು ಶಾಸನಸಭೆಯಲ್ಲಿ ಮಂಡಿಸಿತು..ನವೆಂಬರ್೨೬, ೧೯೪೯ ರಂದು ಅಂಗೀಕರಿಸಲ್ಪಟ್ಟು ಅನೇಕ ಪರಿಶೀಲನೆ ಮತ್ತು ತಿದ್ದುಪಡಿಗಳ ನಂತರ ಜನವರಿ ೨೬,೧೯೫೦ರಂದು ಭಾರತದ ಸಂವಿಧಾನದ ರೂಪುರೇಶೆ ಜಾರಿಗೆ ಬಂದಿತು..
***
ಭಾರತದ ಸ್ವಾತಂತ್ರ್ಯ ಚಳುವಳಿಯ ಸಂದರ್ಭದಲ್ಲಿ ಜನವರಿ ೨೬ರ ದಿನ ಅತ್ಯಂತ ಮಹತ್ವದ್ದು; ಯಾಕಂದ್ರೆ ೧೯೩೦ರ ಇದೇ ದಿನದಂದು ಭಾರತ ರಾಷ್ಟ್ರೀಯ ಕಾಂಗ್ರೆಸ್ ಪೂರ್ಣ ಸ್ವರಾಜ್ಯದ ಧ್ಯೇಯ ಹಾಕಿಕೊಂಡಿತ್ತು..ಲಾಹೋರ್ನಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಈ ನಿರ್ಧಾರವನ್ನು ತೆಗೆದುಕೊಂಡು ಈ ದಿನವನ್ನು ಪೂರ್ಣ ಸ್ವರಾಜ್ಯ ದಿನ ಎಂದು ಘೋಷಿಸಲಾಗಿತ್ತು..ಇದೇ ಕಾರಣಕ್ಕಾಗಿ ಸ್ವಾತಂತ್ರ್ಯಾ ನಂತರ ಭಾರತದ ಸಂವಿಧಾನವನ್ನು ಈ ದಿನದಂದೇ ಜಾರಿಗೆ ತರಲಾಯಿತು..
***
ಭಾರತೀಯ ಗಣರಾಜ್ಯೋತ್ಸವ ಪ್ರತಿ ವರ್ಷದ ಜನವರಿ ೨೬ ರಂದು ಆಚರಿಸಲಾಗುವ ದಿನಾಚರಣೆ.. ಭಾರತೀಯ ಸಂವಿಧಾನ ಜಾರಿಗೆ ಬಂದು ಭಾರತವು ಗಣರಾಜ್ಯವಾದದ್ದು ಜನವರಿ ೨೬, ೧೯೫೦ ರಂದು. ಇದರ ಪ್ರಯುಕ್ತ ಈ ದಿನವನ್ನು ಗಣರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ.ಜನವರಿ ೨೬ ಭಾರತದಾದ್ಯಂತ ಸರ್ಕಾರಿ ರಜಾ ದಿನ. ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಭಾರತ ಸಶಸ್ತ್ರ ಪಡೆಗಳ ಪ್ರಭಾತಭೇರಿ,ಶಸ್ತ್ರಾಸ್ತ್ರ ಪ್ರದರ್ಶನ, ತಾಲೀಮು ಮುಂತಾದ ಪೆರೇಡ್ ನಡೆಯುತ್ತದೆ.. ಹಲವು ದೇಶ ವಿದೇಶಗಳ ಗಣ್ಯ ಅತಿಥಿಗಳು ಈ ಸಂಭ್ರಮವನ್ನು ಕಣ್ಣು ತುಂಬಿಕೊಳ್ಳುತ್ತಾರೆ..
***
ರಾಷ್ಟ್ರಕ್ಕೆ ಭವ್ಯ ಬುನಾದಿ ಹಾಕಿಕೊಟ್ಟ ಈ ದಿನ ಸಮಸ್ತ ಭಾರತೀಯರ ಪಾಲಿನ ವಿಶೇಷ ದಿನವೂ ಹೌದು ನಮ್ಮತನವನ್ನು ಹೆಮ್ಮೆಯಿಂದ ಜಗತ್ತಿಗೆ ಸಾರುವ ಮಹತ್ವದ ದಿನವೂ ಹೌದು..
-ವಿಶ್ವಾಸ್ ಭಾರದ್ವಾಜ್
***
ಭಾರತ ವಿಶ್ವ ಆಡಳಿತ-ರಾಜಕೀಯದ 3ನೇ ಶಕ್ತಿ
ಬಂಡವಾಳ ಶಾಹಿ,ಸಮಾಜವಾದ 2ಕ್ಕೂ ಅಸ್ಥಿತ್ವವಿದೆ
ಗಟ್ಟಿ ಆರ್ಥಿಕ ವ್ಯವಸ್ಥೆಗೆ ಸೌಲತ್ತು ಒದಗಿಸಿದ್ದು ಸಂವಿಧಾನ
ಭಾರತೀಯ ಪ್ರಜಾಸತ್ತಾತ್ಮಕ ವ್ಯವಸ್ಥೆ ಅತ್ಯಂತ ಶ್ರೇಷ್ಟ
ಪರಿಪೂರ್ಣ ಸಂವಿಧಾನ ಜಾರಿಗೆ ಬಂದ ಸುದಿನ ಇಂದು
26 ಜನವರಿ 1950ರಂದು ಜಾರಿಗೆ ತಂದ ಸಂವಿಧಾನ
ಭಾರತ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ
ಅಂಬೇಡ್ಕರ್ ನೇತೃತ್ವದ ಸಮಿತಿ ರಚಿಸಿದ ಕರಡು
ಹಲವು ಸುತ್ತಿನ ಪರಿಶೀಲನೆ ತಿದ್ದುಪಡಿ ನಂತರ ಜಾರಿ
ನಮ್ಮತನವನ್ನು ಹೆಮ್ಮೆಯಿಂದ ಜಗತ್ತಿಗೆ ಸಾರುವ ಮಹತ್ವದ ದಿನ
ರಾಷ್ಟ್ರದ ಎರಡನೇ ದೊಡ್ಡ ರಾಷ್ಟ್ರೀಯ ಹಬ್ಬ ಗಣತಂತ್ರ ದಿನ
***

No comments:

Post a Comment