Wednesday 28 January 2015

ಘಮಘಮಿಸಿದ ಮಲ್ಲಿಗೆಯ ೧೦೦ರ ದಳ

ಕನ್ನಡ ಸಾಹಿತ್ಯದ ಪ್ರೇಮ ಕಬ್ಬಿಗ ಕೆ.ಎಸ್ ನರಸಿಂಹ ಸ್ವಾಮಿ.. ಕನ್ನಡ ಸಾರಸ್ವತ ಲೋಕದಲ್ಲಿ ನರಸಿಂಹ ಸ್ವಾಮಿಗಳ ಪದ್ಯಗಳ ಲಾಲಿತ್ಯಕ್ಕೆ ರಾಜಗೌರವವಿದೆ.. ನರಸಿಂಹ ಸ್ವಾಮಿಗಳ ಕವಿತೆಗಳನ್ನು ಮೆಚ್ಚದ ಸಾಹಿತ್ಯ ಪ್ರೇಮಿಯೇ ಇಲ್ಲ.. ಇಂದು ಈ ಮಹಾಕವಿಯ ಮೈಸೂರು ಮಲ್ಲಿಗೆಯ 100ನೇ ದಳದ ಪರಿಮಳ ಘಮಘಮಿಸಿದೆ.. ಕನ್ನಡಕ್ಕೊಬ್ಬರೇ ಕೆಎಸ್ನ ಅವರ 100ನೇ ಜನ್ಮ ಶತಮಾನೋತ್ಸವ ಇಂದು..
***
ಕಿಕ್ಕೇರಿ ಸುಬ್ಬುರಾವ್ ನರಸಿಂಹಸ್ವಾಮಿ..ಕನ್ನಡ ಸಾರಸ್ವತ ಲೋಕದಲ್ಲಿ ವಿಭಿನ್ನ ಬಗೆಯ ಕವಿತೆಗಳನ್ನು ಬರೆದು ಖ್ಯಾತರಾದ ಪ್ರೇಮಕವಿ.. ತಮ್ಮ ಪದ್ಯಗಳ ರಮಣೀಯ ಭಾವಸಾಗರದಲ್ಲಿ ಭಾವುಕ ಸಾಹಿತ್ಯ ಪ್ರೇಮಿ ರಸಿಕರನ್ನು ತೇಲಿಸಿದ ಕಬ್ಬಿಗ.. ಮಂಡ್ಯ ಜಿಲ್ಲೆಯ ಕೃ‌ಷ್ಣರಾಜಪೇಟೆ ತಾಲ್ಲೂಕಿನ ಕಿಕ್ಕೇರಿಯಲ್ಲಿ 1915ರಲ್ಲಿ ಜನಿಸಿದ ಕೆಎಸ್‌ನ ಕನ್ನಡ ಸಾರಸ್ವತ ಲೋಕವನ್ನು ಉತ್ತುಂಗಕ್ಕೆ ಒಯ್ದ ನವೋದಯ ಕಾವ್ಯ ಸುಕುಮಾರ..ಕೆಎಸ್‌ನ ಎಲ್ಲ ಕಾಲಕ್ಕೂ ಸಲ್ಲುವ ಜನಪ್ರೀತಿಯ ಕಾವ್ಯ ಕೃಷಿಗೆ ದೊಡ್ಡ ಹೆಸರು;ತಮ್ಮ ಕವಿತೆಯ ಭಾಷೆ, ವಸ್ತು, ಲಯಗಳ ಮೇಲೆ ಕಲಾವಿದನ ಕುಂಚದ ಲಾಲಿತ್ಯ ಒದಗಿಸಿದ್ದು ನರಸಿಂಹಸ್ವಾಮಿಗಳ ಪದ್ಯಗಳ ವಿಶೇಷತೆ..
***
ಮೈಸೂರು ಮಲ್ಲಿಗೆಯ ಕವಿತೆಗಳನ್ನು ಕನ್ನಡದ ಯಾವ ಭಾವ ಜೀವಿಯೂ ಮರೆಯುವ ಹಾಗಿಲ್ಲ.. ಈ ಭಾವಗೀತೆಗಳ ಸಂಕಲನದ ಸಿಡಿಗಳು ಹಾಗೂ ಪುಸ್ತಕಗಳು ಹಲವಾರು ಸಾವಿರ ಪ್ರತಿಗಳು ಖರ್ಚಾಗಿವೆ.. ಮಲ್ಲಿಗೆಯ ಘಮ ಹಾಗೂ ಮಣ್ಣಿನ ಕಂಪು ವಾಸನೆಯ ಅಪ್ಪಟ ಕವಿತೆಗಳನ್ನು ಕೆಎಸ್‌ನ ನೀಡಿದ್ದಾರೆ..ಐರಾವತ, ದೀಪದ ಮಲ್ಲಿ, ಉಂಗುರ,ಇರುವಂತಿಗೆ, ಶಿಲಾಲತೆ, ಮನೆಯಿಂದ ಮನೆಗೆ,ತೆರೆದ ಬಾಗಿಲು, ನವಪಲ್ಲವ ಮುಂತಾದ ಕವನ ಸಂಕಲನಗಳು ನರಸಿಂಹ ಸ್ವಾಮಿಗಳ ಸಾಹಿತ್ಯ ಕೃಷಿಯ ಅಮರತ್ವಕ್ಕೆ ಸಾಕ್ಷಿ..
ನರಸಿಂಹ ಸ್ವಾಮಿಯವರ ಸಾಹಿತ್ಯ ಸೇವೆಯನ್ನು ಗುರುತಿಸಿದ ಸರ್ಕಾರ ಹಾಗೂ ಸಂಘ ಸಂಸ್ಥೆಗಳು ನೀಡಿದ ಪ್ರಶಸ್ತಿ ಫಲಕಗಳ ಪಟ್ಟಿಯೂ ದೊಡ್ಡದಿದೆ.. ರಾಜ್ಯ ಸಂಸ್ಕೃತಿ ಇಲಾಖೆ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕುಮಾರ್ ಆಶಾನ್, ಮಾಸ್ತಿ ಪ್ರಶಸ್ತಿ,ಪಂಪ ಪ್ರಶಸ್ತಿ, ಗೊರೂರು ಪ್ರಶಸ್ತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಗೌರವಗಳು ಅವರನ್ನು ಹುಡುಕಿಕೊಂಡು ಬಂದಿವೆ.. ಕೇಂದ್ರ ಸಾಹಿತ್ಯ ಅಕಾಡೆಮಿ ತನ್ನ ಪ್ರತಿಷ್ಠಿತ ಫೆಲೋಶಿಪ್ ಕೆಎಸ್‌ನ ಅವರಿಗೆ ೧೯೯೯ರಲ್ಲಿ ಕೊಟ್ಟು ಗೌರವಿಸಿದೆ.
***
ಜನಮಾನಸದಿಂದ ದೂರಾದರೂ ತಮ್ಮ ಕವಿತೆಗಳ ಮೂಲಕ ಪ್ರೇಮಸುಧೆ ಹರಿಸುತ್ತಾ ಚಿರಂಜೀವತ್ವ ಪಡೆದ ಆ ಮಲ್ಲಿಗೆಯ ಮನಸಿನ ಮಹಾಕವಿಗೆ 100ರ ಜನ್ಮಜಯಂತಿಯ ಶುಭಾಶಯಗಳು..
-ವಿಶ್ವಾಸ್ ಭಾರದ್ವಾಜ್
***
ಕನ್ನಡ ಸಾಹಿತ್ಯದ ಪ್ರೇಮ ಕಬ್ಬಿಗ ಕೆ.ಎಸ್ ನರಸಿಂಹಸ್ವಾಮಿ
ಕನ್ನಡ ಸಾರಸ್ವತ ಲೋಕದಲ್ಲಿ ವಿಶಿಷ್ಟ ಗೌರವ
ನರಸಿಂಹ ಸ್ವಾಮಿ ಪದ್ಯಗಳ ಲಾಲಿತ್ಯಕ್ಕೆ ರಾಜಗೌರವವಿದೆ
ಕೆಎಸ್ನ ಕವಿತೆಗಳ ಮೆಚ್ಚದ ಸಾಹಿತ್ಯ ಪ್ರೇಮಿಯೇ ಇಲ್ಲ
ಮಹಾಕವಿಯ ಮೈಸೂರು ಮಲ್ಲಿಗೆಯ100ನೇ ದಳದ ಪರಿಮಳ ಘಮ
ಕೆಎಸ್ನ ಅವರ 100ನೇ ಜನ್ಮಜಯಂತಿ ಇಂದು
ಸಾಹಿತ್ಯಲೋಕವ ಉತ್ತುಂಗಕ್ಕೇರಿಸಿದ ನವೋದಯ ಕಾವ್ಯ ಸುಕುಮಾರ
ಜನಪ್ರೀತಿಯ ಕಾವ್ಯ ಕೃಷಿಗೆ ದೊಡ್ಡ ಹೆಸರು ಕೆಎಸ್ನ
ಕವಿತೆಯ ಭಾಷೆ,ವಸ್ತು,ಲಯಗಳ ಮೇಲೆ ಕುಂಚದ ಲಾಲಿತ್ಯ
ಮೈಸೂರು ಮಲ್ಲಿಗೆ ಭಾವ ಜೀವಿಗಳ ಮೆಚ್ಚಿನ ಸಂಕಲನ
ಮಲ್ಲಿಗೆ ಘಮ-ಮಣ್ಣಿನ ಕಂಪು ವಾಸನೆ ಪರಿಚಯಿಸಿದ ಕವಿ
ಕವಿತೆಗಳ ಮೂಲಕ ಪ್ರೇಮಸುಧೆ ಹರಿಸಿದ ಕಬ್ಬಿಗ
ಮಲ್ಲಿಗೆಯ ಮನಸಿನ ಮಹಾಕವಿಗೆ ನಮನ

No comments:

Post a Comment