ಇತಿಹಾಸದ ಉದಾಹರಣೆಗಳಿದ್ದರೂ, ವರ್ತಮಾನದಲ್ಲಿ ಸಹ ಆಗಾಗ ಹುಚ್ಚುದೊರೆಗಳು ಹುಟ್ಟುತ್ತಲೇ
ಇರುತ್ತಾರೆ. ಯಾರು ಹೇಳಿದ್ದು ತುಘಲಕ್ ಸತ್ತು ಹೋಗಿದ್ದಾನೆ ಅಂತ? ನಮ್ಮ ನಡುವೆಯೇ ಆಗಾಗ
ತುಘಲಕ್ ಗಳು ಕಾಣಿಸಿಕೊಳ್ಳುತ್ತಾರೆ. ಕರಿ ಕಾಗೆಯನ್ನು ಬಿಳಿಯ ಪಾರಿವಾಳ ಮಾಡುವ ಹುಚ್ಚು
ಆದೇಶಗಳನ್ನು ಜಾರಿಗೆ ತಂದುಬಿಡುತ್ತಾರೆ.. ಅದಕ್ಕೆ ಅಹುದುಹುದೆನ್ನುವ ನೂರಾರು
ವಂಧಿಮಾಗದರು ತಿಕ್ಕಲು ಸಾಮ್ರಾಟರ ಮಗ್ಗುಲಲ್ಲೇ ಇರುತ್ತಾರೆ..
ಆಸ್ಥಾನ ನರ್ತಕಿಯರು, ವಿದೂಷಕರು, ಕಲಾವಿದರು ಮತ್ತೆ ಮತ್ತೆ ಈ ಹುಚ್ಚುದೊರೆಗೆ ಪರಾಕು ಹೇಳಿ ನೆತ್ತಿಗೆ ಪಿತ್ತ ಏರಿಸುತ್ತಾರೆ.
ಪಾಪದ ಪ್ರಜೆಗಳಿಗೆ ಆಡಲಾರದ ಅನುಭವಿಸಲಾರದ ಪಡಿಪಾಟಲು ಧರ್ಮಸಂಕಟ..
ನಿಯತಿ ಇಂಥವರನ್ನು ಬೇಗ ಕರೆಸಿಕೊಳ್ಳಲಿ ಪ್ರಜೆಗಳು ನಿಟ್ಟುಸಿರುಬಿಡುತ್ತಾರೆ..
ಆಸ್ಥಾನ ನರ್ತಕಿಯರು, ವಿದೂಷಕರು, ಕಲಾವಿದರು ಮತ್ತೆ ಮತ್ತೆ ಈ ಹುಚ್ಚುದೊರೆಗೆ ಪರಾಕು ಹೇಳಿ ನೆತ್ತಿಗೆ ಪಿತ್ತ ಏರಿಸುತ್ತಾರೆ.
ಪಾಪದ ಪ್ರಜೆಗಳಿಗೆ ಆಡಲಾರದ ಅನುಭವಿಸಲಾರದ ಪಡಿಪಾಟಲು ಧರ್ಮಸಂಕಟ..
ನಿಯತಿ ಇಂಥವರನ್ನು ಬೇಗ ಕರೆಸಿಕೊಳ್ಳಲಿ ಪ್ರಜೆಗಳು ನಿಟ್ಟುಸಿರುಬಿಡುತ್ತಾರೆ..
No comments:
Post a Comment