Wednesday 22 July 2015

ಅಹುದಹುದು ಕನ್ನಡಕ್ಕೊಬ್ಬರೇ ಗಣೇಶಯ್ಯ: 


1. ಆರ್ಯರು ಪಶ್ಚಿಮದಿಂದ ವಲಸೆ ಬಂದವರಲ್ಲ; ಬದಲಿಗೆ ಇಲ್ಲಂದಲೇ ಪಾಶ್ಚಿಮಾತ್ಯ ದೇಶಗಳಿಗೆ ತೆರಳಿದವರು.. ಸರಸ್ವತಿ ನದಿ ತೀರದಲ್ಲಿ ನಾಗರೀಕತೆ ಕಟ್ಟಿದ ಮೂಲ ಮನುಷ್ಯರು ಇಂಡಸ್ ವ್ಯಾಲಿಯವರೇ ವಿನಃ ಮ್ಯಾಕ್ಸ್ಮುಲ್ಲರ್ ಹೇಳುವಂತೆ ಐರೋಪ್ಯ ರಾಷ್ಟ್ರಗಳಿಂದಲೋ ಅಥವಾ ಮಧ್ಯಪ್ರಾಚ್ಯ ರಾಷ್ಟ್ರಗಳಿಂದಲೋ ಏಷ್ಯಾದ ಕಡೆಗೆ ಬಂದವರು ಅಲ್ಲವೇ ಅಲ್ಲ
-ಶಿಲಾಕುಲ ವಲಸೆ
***
2. ಹೈದರಾಬಾದ್ ನಿಜಾಮನ ಖಜಾನೆ ಬೀದರ್ ಕೋಟೆಯಲ್ಲಿತ್ತಾ..? ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರವೂ ಮುಂದುವರೆದಿದ್ದ ರಜಾಕಾರರ ಅಟ್ಟಹಾಸದ ಪರಿಣಾಮಗಳೇನು..? ಕೊನೆಗೆ ನಿಜಾಮನಲ್ಲಿದ್ದ ಅನಂತ ಸಂಪತ್ತು ಹೋಗಿದ್ದೆಲ್ಲಿಗೆ..? ನಿಜಾಮನ ಖಜಾನೆ ಕಾಯಲು ನಿಗ್ರೋ ಗುಲಾಮರನ್ನು ಆಫ್ರಿಕಾದಿಂದ ಆಮದು ಮಾಡಿಕೊಳ್ಳಲಾಗಿತ್ತಾ..?
-ಏಳು ರೊಟ್ಟಿಗಳು
***
3. ಕರುನಾಡಿನ ಶ್ರೀಮಂತ ಸಾಮ್ರಾಜ್ಯ ಕೃಷ್ಣದೇವರಾಯನ ಖಜಾನೆ ಕಥೆ ಗೊತ್ತಾ..? ಆನೆಗಳ ಮೇಲೆ ಸಂಪತ್ತು ಹೇರಿಕೊಂಡು ಹೋದ ಕೃಷ್ಣದೇವರಾಯನ ನಂತರದ ಪೀಳಿಗೆ ಅವನ್ನು ಹೊತ್ತೊಯ್ದಿದ್ದು ಎಲ್ಲಿ..? ಈ ಖಜಾನೆ ಹುಡುಕಾಟದ ಹಿಂದಿರುವ ತಿರುಪತಿ ಧರ್ಮ ರಾಜಕಾರಣ, ಬೌದ್ಧರು ಹಾಗೂ ಹಿಂದೂಗಳ ನಡುವಿನ ತರ್ಕ ವಾದವಿವಾದ, ವೆಂಕಟೇಶ್ವರ ಮೂರ್ತಿ ಬೌದ್ಧರ ಅವಲೋಕಿತೇಶ್ವರನೇ? ಕೃಷ್ಣದೇವರಾಯನ ಖಜಾನೆ ಪೆನುಕೊಂಡದಲ್ಲಿತ್ತಾ ಅಥವಾ ತಿರುಪತಿಯಲ್ಲಿತ್ತಾ? –
-ಕರಿಸಿರಿಯಾನ
***
4. ಬುದ್ಧನ ಹಲ್ಲಿಗೂ ಅಲೆಗ್ಸಾಂಡರ್ನ ಸಂಪತ್ತಿಗೂ ಸಂಬಂಧವಿದೆಯಾ? ಅಸಲಿಗೆ ಶ್ರೀಲಂಕಾ, ಕಾಂಬೋಡಿಯಾ ಹಾಗೂ ಇನ್ನೆರಡು ರಾಷ್ಟ್ರಗಳಲ್ಲಿ ಸಂರಕ್ಷಿಸಲಾಗಿರುವ ನಾಲ್ಕು ಬುದ್ಧನ ಹಲ್ಲುಗಳಲ್ಲಿ ಬುದ್ಧನ ಮೂಲ ಹಲ್ಲು ಎಲ್ಲಿದೆ.. ತೇರವಾದಿಗಳು ಅನ್ನುವ ಅಜ್ಞಾತ ಬೌದ್ಧ ಸಂರಕ್ಷಕ ಪಡೆ ಇದೆಯೇ..? ಗ್ರೀಕ್ನ ಸಿಡಿಯುವ ನಕ್ಷತ್ರದ ಸಿಂಬಲ್ಗೂ ನಮ್ಮ ಸಾರನಾಥ ಸ್ಥಂಭ ಹಾಗೂ ಅಶೋಕ ಚಕ್ರಕ್ಕೂ ಇರುವ ಸಾಮ್ಯತೆಯೇನು..? ಭಾರತಕ್ಕೆ ದಂಡಯಾತ್ರೆ ಬಂದಿದ್ದ ಅಲೆಗ್ಸಾಂಡರ್ ಖಜಾನೆ ಎಲ್ಲಿದೆ..?
- ಚಿತಾದಂತ
***
5. ಆಂಜನೇಯ ಹೊತ್ತು ತಂದಿದ್ದ ಸಂಜೀವಿನಿ ಪರ್ವತ ಅಂಡಮಾನ್ನಲ್ಲಿತ್ತಾ..? ಜೀವರಕ್ಷಕ ಸಸ್ಯ ಸಂಜೀವಿನಿ ನಿಜಕ್ಕೂ ಇದೆಯಾ..? ಹನುಮಾನ್ ಅನ್ನುವ ಹೆಸರು ಅಂಡಮಾನ್ನ ಮೂಲ ಹೆಸರಾ..? ರುಡಂತಿ ಅಥವಾ ಒಂದು ಜಾತಿಯ ಸೀತಾಳೆ ಸಸ್ಯವೇ ಸಂಜೀವಿನಿಯಾ..?
- ಕಪಿಲಿಪಿಸಾರ
***
6. ಡಾರ್ವಿನ್ನ ವಿಕಾಸವಾದ ನಿಜಕ್ಕೂ ಸತ್ಯವೇ..? ಜೀವ ವಿಕಾಸಕ್ಕಿಂತ ಮೊದಲು ಜೀವಕ್ಕೆ ಸಾವು ಇರಲಿಲ್ಲವೇ..? ಏಕಾಣು ಜೀವಿ ಬಹು ಅಣು ಜೀವಸತ್ವ ತಂತುಗಳ ಮಾನವನಾಗಿ ರೂಪುಗೊಂಡಿದ್ದು ಹೇಗೆ..? ನಿಜಕ್ಕೂ ಪ್ಯಾರಾಸೆಲ್ ದ್ವೀಪಗಳಲ್ಲಿ ಚೀನಿಯರು ಕಾನೂನು ಬಾಹಿರ ಸಂಶೋದನೆಗಳನ್ನು ನಿರ್ವಹಿಸುತ್ತಾರಾ..? ಮಾನವ ತನ್ನ ವಂಶಕ್ಕಾಗಿ ಆಸ್ತಿ ಮಾಡುವುದು ಜೀವಕೋಶದಲ್ಲಿರುವ ಸ್ವಾರ್ಥ ದಾತುವಿನ ಕಾರಣದಿಂದಲಾ..?
-ಮೂಕಧಾತು
***
7. ಚಂದ್ರಗುಪ್ತ ಮೌರ್ಯ ಜೈನ ಧರ್ಮದ ಉದ್ಧಾರಕ್ಕಾಗಿ ದಕ್ಷಿಣಕ್ಕೆ ಅಪಾರ ಸಂಪತ್ತು ತಂದನೇ..? ಆಗ ಶ್ರವಣಬೆಳಗೊಳಕ್ಕೆ ಬಂಗಾರದ ಮುಸುಕಿನ ಜೋಳ ತರಲಾಯ್ತೇ..? 12 ಸಾವಿರ ರಥಗಳಲ್ಲಿ ಚಿನ್ನದ ಜೋಳದ ತೆನೆ ಬಂದಿದ್ದು ನಿಜವೇ..? ಪ್ರಾಚೀನ ಕೆತ್ತನೆಗಳಲ್ಲಿ ಶಿಲಾಬಾಲಕಿಯರ ಕೈನಲ್ಲಿರುವ ಫಲ ಜೋಳವೇ..? ಹಾಗಿದ್ದರೆ ಆ ಅಪಾರ ಸಂಪತ್ತು ಕರಗಿದ್ದೆಲ್ಲಿ..? ವಿಷ್ಣುವರ್ಧನನ ಪಟ್ಟದರಸಿ ಶಾಂತಲಾ ದೇವಿ ಪ್ರಾಣತ್ಯಾಗ ಮಾಡಿಕೊಂಡ ಶಿವಗಂಗಾ ಬೆಟ್ಟದ ಸುತ್ತಮುತ್ತಲ ಕಥೆಯೇನು..? ಬಿಟ್ಟಿದೇವ ಜೈನ ಧರ್ಮದಿಂದ ವೈಷ್ಣವ ವಿಷ್ಣುವರ್ಧನನಾಗಿದ್ದು ಹೇಗೆ..?
-ಕನಕ ಮುಸುಕು
***
8. ಶ್ರೀಲಂಕಾದಲ್ಲಿ ತಮಿಳರು ಹಾಗೂ ಸಿಂಹಳರ ನಡುವಿನ ವೈಷಮ್ಯಕ್ಕೆ ನಿಜವಾದ ಕಾರಣ-ಸಿಗೀರಿಯಾ
***
9. ಬೇಲೂರು ಶಿಲಾಬಾಲಕಿಯರ ಮದನಿಕೆಗಳ ಕೆತ್ತನೆಗೆ ರೂಪದರ್ಶಿ ಬೇರಾರು ಅಲ್ಲ ವಿಷ್ಣುವರ್ಧನನ ಪಟ್ಟದರಸಿ ಶಾಂತಲಾದೇವಿ
-ಕಲೆಯ ಬಲೆ, ಪದ್ಮಪಾಣಿ
***
10. ಮೈಸೂರು ಅರಸರಿಗೆ ಅಲಮೇಲಮ್ಮ ಶಾಪವನ್ನು ಕೊಟ್ಟಿದ್ದೇ ಸುಳ್ಳು; ತಲಕಾಡು ಮರಳಾಗಿದ್ದು, ಮಾಲಂಗಿ ಮಡುವಾಗಿದ್ದು ಶಾಪದ ಪ್ರಭಾವದಿಂದ ಅಲ್ಲ ಬದಲಿಗೆ ಅದೊಂದು ಪ್ರಾಕೃತಿಕ ಬದಲಾವಣೆಯಷ್ಟೆ..
-ಮರಳ ತೆರೆಯೊಳಗೆ, ಪದ್ಮಪಾಣಿ
***
11. ಕಿತ್ತೂರಿನ ಸಂಸ್ಥಾನದಲ್ಲೂ ಒಂದು ನವಿರಾದ ಪ್ರೇಮಕಥೆ ಇದೆ.. ಜೊತೆಗೆ ಅಂತರ್ಧರ್ಮೀಯ ರಾಣಿಯ ತ್ಯಾಗದ ವ್ಯಥೆಯೂ ಇದೆ..
- ಕಿತ್ತೂರು ನಿರಂಜನಿ, ಪದ್ಮಪಾಣಿ
ಬರೆಯುತ್ತಾ ಹೋದರೆ ಮುಗಿಯಲಾರದಷ್ಟು ನಾವು ಈವರೆಗೆ ಕಂಡು ಕೇಳರಿಯದ ಅಸಲು ಚರಿತ್ರೆಯ ಹಂದರಗಳ ಅದ್ಭುತ ವಿಶ್ವ ಅನಾವರಣಗೊಳ್ಳುತ್ತೆ ಕೆ.ಎನ್ ಗಣೇಶಯ್ಯನವರ ಕೃತಿಗಳಲ್ಲಿ.. ಇನ್ನೂ ಓದಿಲ್ಲವಾದರೆ ಈಗಲೇ ಓದಲು ಶುರುಮಾಡಿ.. Am dam sure definitely you will love the writings.. ಅಹುದಹುದು ಕನ್ನಡಕ್ಕೊಬ್ಬರೇ ಕನ್ನಡದ ಆಸ್ತಿ ಗಣೇಶಯ್ಯ..
-ವಿಶ್ವಾಸ್ ಭಾರದ್ವಾಜ್

No comments:

Post a Comment