Wednesday 22 July 2015

ಹಿಂದೆ ತುಳಿದ ಮಂದಿ ಈಗ ತುಳಿಸಿಕೊಳ್ಳಲಿ ಬಿಡಿ..

ಹಸಿವು ಬಡತನ ಅವಮಾನ ಇವೆಲ್ಲವೂ ಅನ್ನಭಾಗ್ಯ ಫಲಾನುಭವಕ್ಕೆ ಮಾನದಂಡಗಳು!!!
ಆದರೆ ಈ ಹಸಿವು ಅನ್ನೋದಿದ್ಯಲ್ಲ, ಅದು ಕೇವಲ ಅಹಿಂದ ಜಾತಿಗಳಿಗೆ ಮಾತ್ರ ಆಗುವಂತದ್ದು..
ದಲಿತರಿಗೆ, ಹಿಂದುಳಿದ ವರ್ಗಗಳಿಗೆ ಮಾತ್ರ ಹಸಿವಿನ ಆರ್ತನಾದದ ಪರಿಚಯವಿದೆ..
ಈ ಮೇಲ್ವರ್ಗದ ಬ್ರಾಹ್ಮಣರು, ಲಿಂಗಾಯಿತರು, ಗೌಡರು, ಒಕ್ಕಲಿಗರು ಪ್ರಭಾವಿಗಳು ಶತಶತಮಾನಗಳಿಂದ ಊಳಿಗ ಇಟ್ಟುಕೊಂಡಿದ್ದವರು.. ಜಮೀನುದಾರರು..
(ಇವತ್ತು ಆ ಎಲ್ಲಾ ಜಮೀನುದಾರರ ಹೊಲ ಗದ್ದೆಗಳು ಉಳುವವನ ಪಾಲಾಗಿ ಉಳಿದಿದ್ದ ಹಳೆಯ ಮಣ್ಣಿನ ಗೋಡೆ ಮನೆಯ ಕೊನೆಯ ಜಂತಿಯೂ ನೆಲಕ್ಕೆ ಬಿದ್ದಿದೆ.. ಅದು ಒತ್ತಟ್ಟಿಗಿರಲಿ)
ಹಿಂದೆ ಶತಶತಮಾನಗಳಿಂದ ಮೃಷ್ಟಾನ್ನ ತಿಂದ ಮಂದಿ ಈಗಲೂ ಅದನ್ನೇ ತಿನ್ನುತ್ತಿದ್ದಾರೆ ಹಾಗಾಗಿ ಅವರಿಗೆ ಹಸಿವಿನ ಘೋರ ಅನುಭವದ ಅರಿವಿಲ್ಲ..!!
ಅವರಿಗೆ ಅನ್ನಭಾಗ್ಯವೂ ಬೇಡ, ಅತ್ಯೋಧಯವೂ ಬೇಡ, ಯಶಸ್ವಿನಿಯೋ ಮತ್ತೊಂದೂ ಯೋಜನೆಗಳ ಫಲ ಬೇಡ, ರಿಸರ್ವೇಶನ್ ಬೇಡವೇ ಬೇಡ..!!
ಸರಿ ದೊರೆಗಳೇ ನೀವು ಹೇಳೋದು ಶತಾಂಶ ಸಹಸ್ರಾಂಶವೂ ಸರಿ ಸರಿ..
ಬ್ರಾಹ್ಮಣರಿಗೆ, ವೀರಶೈವರಿಗೆ, ಶೆಟ್ಟರು, ಗೌಡರಿಗೆ, ಈ ಜನರಲ್ ಕ್ಯಾಟಗರಿಯಲ್ಲಿ ಯಾವ ಜಾತಿಯವರಿಗೂ ಹಸಿವೇ ಆಗೋದಿಲ್ಲ ಬಿಡಿ..
ಅವರಿಗೇಕೆ ಅನ್ನಭಾಗ್ಯ..???
ಹಿಂದೆ ತುಳಿದ ಮಂದಿ ಈಗ ತುಳಿಸಿಕೊಳ್ಳಲಿ ಬಿಡಿ..
ಇದೇ ನೋಡಿ ಸರಿಯಾದ ಸಾಮಾಜಿಕ ನ್ಯಾಯ..
ಹಲ್ಲಿಗೆ ಹಲ್ಲು, ಕಣ್ಣಿಗೆ ಕಣ್ಣು, ಅನ್ನುತ್ತಿದ್ದ ಹಮ್ಮು ರಾಬಿಯ ಸರ್ವಶ್ರೇಷ್ಠ ಸಾಮಾಜಿಕ ನ್ಯಾಯ ಇದೆ.. ಟಿಟ್ ಫರ್ ಟ್ಯಾಟ್.. ಗ್ರೇಟ್!!!

No comments:

Post a Comment