Wednesday 22 July 2015

ಮುತ್ತಿನಂತ ಮಾತುಗಳು:


-ವಿಪ್ರವಿಶ್ವತ್,
1. ಭರವಸೆ ಹಾಗೂ ಆಶಾವಾದ ಅನ್ನುವುದು ಜೀವನವೆಂಬ ಮರುಭೂಮಿಯಲ್ಲಿ ಅಲ್ಲಲ್ಲಿ ಕಂಡುಬರುವ ಒಯಾಸಿಸ್ನಂತಹ ನೀರಿನ ಚಿಲುಮೆಗಳಿದ್ದಂತೆ
***
2. ಕಳೆದುಕೊಂಡ ಇಂದಿನ ಸಂತೋಷವನ್ನು ನಾಳೆ ನೆನೆದು ಕೊರಗುವುದು ನಿಜವಾದ ಮೂರ್ಖತನ
***
3. ಆಗಾಗ ಅಚಾತುರ್ಯವಾಗುತ್ತಿದ್ದಾಗ ಮಾತ್ರ ಬದುಕಲ್ಲಿ ಹೊಸದೊಂದು ಆಯಾಮ ಆವಿಷ್ಕರಿಸಲು ಸಾಧ್ಯ
***
4. ಹೊಸ ನೀರು ಉಕ್ಕಿ ಹರಿಸಲು ಹಳೆಯ ನೀರನ್ನು ಹರಿಯಗೊಡಲೇಬೇಕು
***
5. ಬದುಕಿನಲ್ಲಿ ಸಂಭವಿಸುವ ನಿರಂತರ ಭಾವನಾತ್ಮಕ ಆಘಾತಗಳು ಎಂಥ ನಿರ್ಭಲ ಮನಸ್ಥಿತಿಯ ಜನರನ್ನೂ ಗಟ್ಟಿಗೊಳಿಸುತ್ತದೆ
***
6. ನಮ್ಮ ನಿಲುವು ಹಾಗೂ ಧೋರಣೆಗಳು ಬಲವಾಗಿದ್ದಾಗ ಮಾತ್ರ ಸಮುದಾಯ ನಮ್ಮನ್ನು ಪ್ರತ್ಯೇಕ ದೃಷ್ಟಿಯಲ್ಲಿ ಗೌರವದಿಂದ ಕಾಣುತ್ತದೆ
***
7. ಬದುಕಿನಲ್ಲಿ ನೂರು ದಾರಿಗಳು ಬೇರೆ ಬೇರೆ ದಿಕ್ಕುಗಳಲ್ಲಿ ಸಾಗಿದರೂ ಆ ಎಲ್ಲಾ ದಾರಿಗಳ ಅಂತ್ಯ ಮಾತ್ರ ಸಾವು ಅನ್ನುವ ಒಂದೇ ದಿಕ್ಕಿನದ್ದಾಗಿರುತ್ತದೆ
***
8. ಸದಾ ಅಮಂಗಳ ನುಡಿಯುವ ನೂರು ಜನ ಆಪ್ತಮಿತ್ರರುಗಳಿಗಿಂತ ಅಪರೂಪಕ್ಕೊಮ್ಮೆ ನಿಮ್ಮ ತಾಕತ್ತಿನ ಬಗ್ಗೆ ಮೆಚ್ಚುಗೆ ಸೂಸುವ ಒಬ್ಬ ಬದ್ಧ ಶತ್ರು ಉತ್ತಮ
***
9. ನಿನಗೆ ಸಿಗಬೇಕು ಎಂದು ಬಯಸುವ ಪ್ರೀತಿ ನಿಮ್ಮೊಳಗೆ ಅಡಗಿರುತ್ತದೆ; ಅದನ್ನು ಯಾವ ಪ್ರಮಾಣದಲ್ಲಿ ನೀವು ಹೊರಗೆ ಹಂಚುತ್ತೀರೋ ಅಷ್ಟೇ ಪ್ರಮಾಣದಲ್ಲಿ ನಿಮಗೆ ತಿರುಗಿ ಲಭಿಸುತ್ತದೆ
***
10. ನೀವು ಸ್ವಚ್ಛ ಬಟ್ಟೆ ಧರಿಸಿಕೊಂಡಿದ್ದರೇ ನಿಮ್ಮ ಸುತ್ತಲೇ ಇರುವ, ನಿಮ್ಮ ಮೇಲೆ ಕೊಚ್ಚೆ ಎರಚುವವರ ಬಗ್ಗೆ ಎಚ್ಚರ
***
11. ಬುದ್ದಿ ಹಾಗೂ ಪ್ರಜ್ಞೆಗೆ ಗೋಚರಿಸದ ಎಷ್ಟೋ ಅವ್ಯಕ್ತ ಸಂಗತಿಗಳು ಆತ್ಮ ಹಾಗೂ ಭಾವದ ಕಣ್ಣಿಗೆ ಕಾಣಿಸುತ್ತವೆ
***
12. ಕಿರೀಟವಿಲ್ಲದ ಅರಸ, ಖತ್ತಿ ಇಲ್ಲದ ಕ್ಷತ್ರಿಯ, ತಕ್ಕಡಿ ಇಲ್ಲದ ವೈಶ್ಯ ಹೇಗೆ ಅರ್ಥಹೀನನೋ ಹಾಗೆಯೇ ವಿವೇಕವಿಲ್ಲದ ಪಂಡಿತ ಸಹ ಅರ್ಥಹೀನ
***
13. ಭಗ್ನಗೊಂಡ ಮನಸ್ಸಿಗೆ ನೂರು ಸಮಾಧಾನ ಸಂತೈಕೆಗಳಿಗಿಂತ ಒಂದು ಸಣ್ಣ ಭರವಸೆ ಹಾಗೂ ಆಶಾವಾದ ಅಗತ್ಯವಿರುತ್ತದೆ
***
14. ಕಾಸು ಕೊಟ್ಟು ಕಷ್ಟ ಪಡೆಯುವ ಸಿರಿವಂತನಿಗಿಂತ ಕಾಸೇ ಇಲ್ಲದ ನಿರ್ಗತಿಕ ಎಷ್ಟೋ ಉತ್ತಮ; ಕನಿಷ್ಟ ಪಕ್ಷ ಕಷ್ಟ ಖರೀದಿಸುವ ಗೋಳಿರುವುದಿಲ್ಲ
***
15. ಪ್ರತಿಯೊಂದು ಸಂಕಷ್ಟಗಳೂ ಬದುಕಿನ ವಿವಿಧ ಆಯಾಮಗಳನ್ನು ಪರಿಚಯಿಸುವ ಅತ್ಯಗತ್ಯ ಕ್ರಿಯೆ ಮಾತ್ರ; ಇದರಿಂದ ಬದುಕಿನ ಸವಾಲುಗಳನ್ನು ಎದುರಿಸುವುದು ಸುಲಭಸಾಧ್ಯ
***
16. ಅತಿ ಮಾತಾಡುವ ಮತಿಗೇಡಿಗಳ ಸಂಗಡ ನೂರು ದಿನ ಕಳೆಯುವುದಕ್ಕಿಂತ ಸೂಕ್ಷ್ಮಮತಿ ಜ್ಞಾನಿಗಳೊಂದಿಗೆ ಕಳೆಯುವ ಒಂದು ದಿನ ಅತ್ಯುತ್ತಮ
***
17. ಪರಿಪೂರ್ಣತೆಯ ಸಾಧನೆ ಒಂದು ನಿರಂತರ ತಪಸ್ಸಿನಂತೆ; ಒಮ್ಮೆಲೆ ಸಿದ್ಧಿಸುವುದಿಲ್ಲ ಹಾಗೂ ಸಿದ್ಧಿಯಾದ ನಂತರ ಮುಗಿಯುವಂತದ್ದೂ ಅಲ್ಲ
***
18. ಹೊಸದು ಕಟ್ಟುವ ಉತ್ಸಾಹದಲ್ಲಿ ಹಳೆಯದರ ಗತ ಚಾರಿತ್ರಿಕ ವೈಭವ ಮರೆಯಬಾರದು
***
19. ಪ್ರತಿಯೊಂದು ಅಸ್ತ್ರಗಳಿಗೂ ಪ್ರತಿಯಾದ ಪ್ರತ್ಯಾಸ್ತ್ರವಿದ್ದೇ ಇರುತ್ತದೆ; ಯಾವ ಅಸ್ತ್ರಕ್ಕೆ ಪ್ರತಿಯಾಗಿ ಯಾವ ಅಸ್ತ್ರವನ್ನು ಪ್ರಯೋಗಿಸಬೇಕು ಅನ್ನುವ ಜ್ಞಾನ ಅತಿ ಮುಖ್ಯ
***
20. ಬದುಕುವ ಕಾಲದಲ್ಲಿ ಸಾವಿನ ಧ್ಯಾನ ಅಥವಾ ಸಾವಿನಂಚಿನಲ್ಲಿ ಬದುಕಿನ ಕನವರಿಕೆ ಎರಡೂ ವ್ಯರ್ಥ
***
21. ಯಾವುದೇ ಇತಿಹಾಸವಾದರೂ ಮತ್ತೆ ಮರುಕಳಿಸಬಹುದೇ ವಿನಃ ಹೊಸದಾಗಿ ಸೃಷ್ಟಿಯಾಗುವುದಿಲ್ಲ
***
-ವಿಭಾ

No comments:

Post a Comment