ಕೆಲವು ಅನಿಷ್ಟ ವ್ಯೆಕ್ತಿತ್ವದ ಅಲ್ಪ ಮನುಷ್ಯರು ನಮ್ಮ ಅಕ್ಕಪಕ್ಕದಲ್ಲಿರ್ತಾರೆ.. ಸಾಧ್ಯ ಆದಷ್ಟು ಅವರನ್ನು ದೂರ ಇಡೋದೆ ಉತ್ತಮ..
ಅವರು ಸ್ನೇಹಕ್ಕಿರಲಿ ಕನಿಷ್ಟ ನಂಬಿಕೆಗೂ ಅರ್ಹರಲ್ಲ.. ಅವರಿಂದ ಒಬ್ಬನೇ ಒಬ್ಬನಿಗೆ ಕಿಂಚಿತ್ತೂ ಉಪಕಾರ ಸಿಗುವುದಿಲ್ಲ.. ಸಮಾಜದಲ್ಲಿ ಅವರ ಅಸ್ತಿತ್ವ ಅನ್ನೋದಕ್ಕೆ ಅರ್ಥವೇ ಇರೋದಿಲ್ಲ.. ಅವರೊಂತರಾ ನಾಯಿ ಮೊಲೆಯ ಹಾಲಿದ್ದಂತೆ.. ದೇವರ ನೈವಿದ್ಯಕ್ಕೂ ಅಲ್ಲ, ಅಭಿಷೇಕಕ್ಕೂ ಅಲ್ಲ, ಕೊನೆಗೆ ಕುಡಿದು ಹೊಟ್ಟೆ ತುಂಬಿಸಿಕೊಳ್ಳೋದಕ್ಕೂ ಅಲ್ಲದ ವ್ಯರ್ಥ ಕ್ಷೀರ..
ಅವರೊಂದಿಗೆ ನೀವು ಎಷ್ಟೇ ಬಡಿದಾಡಿದ್ರೂ ನಿಮ್ಮಪ್ಪನಾಣೆ ಅವರನ್ನು ಬದಲಾಯಿಸೋಕೆ ಸಾಧ್ಯ ಇಲ್ಲ.. ಅವರಿಗೆ ಕೆಲಸ ಆಗಬೇಕಂದ್ರೆ ನೀವು ಅವರ ಪಾಲಿನ ನಿಜದೈವ, ಕೆಲಸ ಆದ ಮೇಲೆ ನೀವು ಕಾಲ ಕೆಳಗಿನ ಕಸಕ್ಕಿಂತಲೂ ಕಡೆ..
ಆದರೂ ಅವರು ನಿಮ್ಮ ಸುತ್ತ ಸುತ್ತುತ್ತಲೇ ಇರುತ್ತಾರೆ ತಮ್ಮ ರತಿಯನ್ನು ತಾವೇ ತೃಪ್ತಿ ಪಡಿಸಿಕೊಳ್ಳುತ್ತಾ, ತಮಗೆ ತಾವೆ ಪರಾಕು ಹೇಳಿಕೊಳ್ಳುತ್ತಾ, ತಮ್ಮನ್ನು ತಾವೇ ಸರ್ವಶ್ರೇಷ್ಟರೆಂದುಕೊಳ್ಳುತ್ತಾ, ಮುಟ್ಟುಬಾರದ ಜಾಗಗಳನ್ನು ಮುಟ್ಟಿ ತಟ್ಟಿ ತುರುಸಿಕೊಳ್ಳುತ್ತಿರುತ್ತಾರೆ..
ಅವರಿಂದ ನಿಮಗೆ ಎಲ್ಲಾದರೂ ನಯಾಪೈಸೆ ಉಪಕಾರ ಅಂತಾದ್ರೆ ಅದರ ಹಿಂದೆಯೇ ನಿಮ್ಮನ್ನು ಸಾರ್ವಜನಿಕವಾಗಿ ಉಪಕೃತಗೊಂಡವ ಅಂತ ಬೆರಳು ಮಾಡಿ ತೋರಿಸುವ ಆಶಾಡಭೂತಿ ಪ್ರೇತವದು..
ಅದಲ್ಲದಕ್ಕಿಂತ ದೊಡ್ಡ ಅಪಾಯವೆಂದರೇ ಅವರು ನಿಮ್ಮ ನಡುವೆಯೇ ಇದ್ದು ಕೊನೆಗೆ ನಿಮ್ಮತನದ ಮಧ್ಯೆಯೇ ಗೋಡೆ ಕಟ್ಟಿ ಬಿಡುತ್ತಾರೆ ಅಥವಾ ಕಂದಕ ತೋಡುತ್ತಾರೆ.. ಸಾಧ್ಯ ಆದರೆ ನಿಮ್ಮನ್ನು ಅದೇ ಕಂದಕಕ್ಕೆ ದೂಡಿ ಕೈ ತಟ್ಟಿ ವಿಕಟಹಾಸ ಮಾಡುತ್ತಾರೆ.. ಅಂತ ನೀಚ ವ್ಯೆಕ್ತಿಗಳು ಮಿತ್ರತ್ವ ಒತ್ತಟ್ಟಿಗಿರಲಿ ಶತ್ರುವಾಗಲೂ ಲಾಯಕ್ಕಲ್ಲ..
ಸಾಧ್ಯ ಆದರೆ ಅವರನ್ನು ದೂರವಿಡಿ; ಹತ್ತಿರ ಬಂದರೆ ಮುಖ ಸಿಂಡರಿಸಿ ಅಸಹ್ಯ ಪಟ್ಟುಕೊಳ್ಳಿ ಅವರು ಅಂತಹ ಹೇಸಿಗೆಯ ಜಿಗುಟು ಜಿಡ್ಡು..
ಇಷ್ಟೆಲ್ಲಾ ಹೇಳಿದ ಬಳಿಕವಾದ್ರೂ ನಿಮ್ಮ ಬದುಕಿನಲ್ಲಿ ಅಂತಹವರೇನಾದ್ರೂ ಬಂದ್ರೆ; ಅವರನ್ನು ಒರೆಸಿ ಮುದ್ದೆ ಮಾಡಿ ಎಸೆಯುವ ಟಿಷ್ಯೂ ಪೇಪರ್ ಅಂತ ಪರಿಗಣಿಸಿ..
ಶುಭಂ
-ವಿಭಾ
ಅವರು ಸ್ನೇಹಕ್ಕಿರಲಿ ಕನಿಷ್ಟ ನಂಬಿಕೆಗೂ ಅರ್ಹರಲ್ಲ.. ಅವರಿಂದ ಒಬ್ಬನೇ ಒಬ್ಬನಿಗೆ ಕಿಂಚಿತ್ತೂ ಉಪಕಾರ ಸಿಗುವುದಿಲ್ಲ.. ಸಮಾಜದಲ್ಲಿ ಅವರ ಅಸ್ತಿತ್ವ ಅನ್ನೋದಕ್ಕೆ ಅರ್ಥವೇ ಇರೋದಿಲ್ಲ.. ಅವರೊಂತರಾ ನಾಯಿ ಮೊಲೆಯ ಹಾಲಿದ್ದಂತೆ.. ದೇವರ ನೈವಿದ್ಯಕ್ಕೂ ಅಲ್ಲ, ಅಭಿಷೇಕಕ್ಕೂ ಅಲ್ಲ, ಕೊನೆಗೆ ಕುಡಿದು ಹೊಟ್ಟೆ ತುಂಬಿಸಿಕೊಳ್ಳೋದಕ್ಕೂ ಅಲ್ಲದ ವ್ಯರ್ಥ ಕ್ಷೀರ..
ಅವರೊಂದಿಗೆ ನೀವು ಎಷ್ಟೇ ಬಡಿದಾಡಿದ್ರೂ ನಿಮ್ಮಪ್ಪನಾಣೆ ಅವರನ್ನು ಬದಲಾಯಿಸೋಕೆ ಸಾಧ್ಯ ಇಲ್ಲ.. ಅವರಿಗೆ ಕೆಲಸ ಆಗಬೇಕಂದ್ರೆ ನೀವು ಅವರ ಪಾಲಿನ ನಿಜದೈವ, ಕೆಲಸ ಆದ ಮೇಲೆ ನೀವು ಕಾಲ ಕೆಳಗಿನ ಕಸಕ್ಕಿಂತಲೂ ಕಡೆ..
ಆದರೂ ಅವರು ನಿಮ್ಮ ಸುತ್ತ ಸುತ್ತುತ್ತಲೇ ಇರುತ್ತಾರೆ ತಮ್ಮ ರತಿಯನ್ನು ತಾವೇ ತೃಪ್ತಿ ಪಡಿಸಿಕೊಳ್ಳುತ್ತಾ, ತಮಗೆ ತಾವೆ ಪರಾಕು ಹೇಳಿಕೊಳ್ಳುತ್ತಾ, ತಮ್ಮನ್ನು ತಾವೇ ಸರ್ವಶ್ರೇಷ್ಟರೆಂದುಕೊಳ್ಳುತ್ತಾ, ಮುಟ್ಟುಬಾರದ ಜಾಗಗಳನ್ನು ಮುಟ್ಟಿ ತಟ್ಟಿ ತುರುಸಿಕೊಳ್ಳುತ್ತಿರುತ್ತಾರೆ..
ಅವರಿಂದ ನಿಮಗೆ ಎಲ್ಲಾದರೂ ನಯಾಪೈಸೆ ಉಪಕಾರ ಅಂತಾದ್ರೆ ಅದರ ಹಿಂದೆಯೇ ನಿಮ್ಮನ್ನು ಸಾರ್ವಜನಿಕವಾಗಿ ಉಪಕೃತಗೊಂಡವ ಅಂತ ಬೆರಳು ಮಾಡಿ ತೋರಿಸುವ ಆಶಾಡಭೂತಿ ಪ್ರೇತವದು..
ಅದಲ್ಲದಕ್ಕಿಂತ ದೊಡ್ಡ ಅಪಾಯವೆಂದರೇ ಅವರು ನಿಮ್ಮ ನಡುವೆಯೇ ಇದ್ದು ಕೊನೆಗೆ ನಿಮ್ಮತನದ ಮಧ್ಯೆಯೇ ಗೋಡೆ ಕಟ್ಟಿ ಬಿಡುತ್ತಾರೆ ಅಥವಾ ಕಂದಕ ತೋಡುತ್ತಾರೆ.. ಸಾಧ್ಯ ಆದರೆ ನಿಮ್ಮನ್ನು ಅದೇ ಕಂದಕಕ್ಕೆ ದೂಡಿ ಕೈ ತಟ್ಟಿ ವಿಕಟಹಾಸ ಮಾಡುತ್ತಾರೆ.. ಅಂತ ನೀಚ ವ್ಯೆಕ್ತಿಗಳು ಮಿತ್ರತ್ವ ಒತ್ತಟ್ಟಿಗಿರಲಿ ಶತ್ರುವಾಗಲೂ ಲಾಯಕ್ಕಲ್ಲ..
ಸಾಧ್ಯ ಆದರೆ ಅವರನ್ನು ದೂರವಿಡಿ; ಹತ್ತಿರ ಬಂದರೆ ಮುಖ ಸಿಂಡರಿಸಿ ಅಸಹ್ಯ ಪಟ್ಟುಕೊಳ್ಳಿ ಅವರು ಅಂತಹ ಹೇಸಿಗೆಯ ಜಿಗುಟು ಜಿಡ್ಡು..
ಇಷ್ಟೆಲ್ಲಾ ಹೇಳಿದ ಬಳಿಕವಾದ್ರೂ ನಿಮ್ಮ ಬದುಕಿನಲ್ಲಿ ಅಂತಹವರೇನಾದ್ರೂ ಬಂದ್ರೆ; ಅವರನ್ನು ಒರೆಸಿ ಮುದ್ದೆ ಮಾಡಿ ಎಸೆಯುವ ಟಿಷ್ಯೂ ಪೇಪರ್ ಅಂತ ಪರಿಗಣಿಸಿ..
ಶುಭಂ
-ವಿಭಾ
No comments:
Post a Comment