ಪ್ರಪಂಚಕ್ಕೆಒಂದು ಆತ್ಮವಿದೆ.. ಅನಂತ ವಿಶ್ವದಲ್ಲಿ ಅಡಗಿರುವ ಎಲ್ಲವೂ ನಮ್ಮ
ವರ್ತನೆಯನ್ನು ಬಲ್ಲವು.. ಆದರೆ ಮನುಷ್ಯನಿಂದ ವಿಶ್ವದ ಆತ್ಮವನ್ನು ಅರ್ಥ ಮಾಡಿಕೊಳ್ಳಲು
ಸಾಧ್ಯವಿಲ್ಲ..!!
ಯಾವ ಮನುಷ್ಯ ಪ್ರಪಂಚದ ಆತ್ಮವನ್ನು ಹೊಕ್ಕು ಅನಂತದಾಳವನ್ನು ಅಳೆಯುತ್ತಾನೋ ಆತ ಚಿರಂಜೀವಿಯಾಗಿ ಉಳಿಯುತ್ತಾನೆ..!!
ವಿಶ್ವಾತ್ಮದ ಚಿಂತನೆಗೈದ ಮೊದಲ ಪುರುಷ ಶ್ರೀಕೃಷ್ಣ.. ಅದನ್ನೇ ಕೃಷ್ಣ ಗೀತೆಯ ಮೂಲಕ ಅರ್ಜುನನಿಗೆ ಅರ್ಥ ಮಾಡಿಸಲು ಹೋಗುತ್ತಾನೆ.. ಆದರೆ ಕೃಷ್ಣನಿಗಿಂತ ಮುಂಚೆ ವಿಶ್ವಾತ್ಮ ಸಂಭವನೀಯತೆಯ ಅರಿವಿದ್ದಿದ್ದು ಸೂರ್ಯನಿಗೆ ಅನ್ನುವ ಪೌರಾಣಿಕ ನಂಬಿಕೆ ನಮ್ಮಲ್ಲಿದೆ..!!
ಹಿಮಾಲಯದಲ್ಲಿ ತಪಸ್ಸು ಮಾಡುವ ವಿಕ್ಷಿಪ್ತ ಸಾಧುಗಳಿಗೆ ಪ್ರಪಂಚದ ಆತ್ಮವನ್ನು ಅರಿಯುವ ಸಾಮರ್ಥ್ಯವಿದೆ ಅನ್ನುವವರಿದ್ದಾರೆ.. ದಕ್ಷಿಣೇಶ್ವರದ ಕಾಳಿಯ ಉಪಾಸಕ ರಾಮಕೃಷ್ಣ ಪರಮಹಂಸರಿಗೆ ಅನಂತ ವಿಸ್ತಾರದೊಳಕ್ಕೆ ಚಲಿಸಬಲ್ಲ ತಾಕತ್ತು ಇತ್ತಂತೆ..!!
ಅವರು ತಮ್ಮ ಪ್ರಿಯ ಶಿಷ್ಯ ನರೇಂದ್ರನಿಗೆ ಈ ದಿವ್ಯ ಜ್ಞಾನ ಉಪದೇಶಿಸಿದ್ರು ಅನ್ನುವುದನ್ನು ಕೇಳಿದ್ದೇನೆ. ಆದರೆ ವಿವೇಕಾನಂದರು ಮೂರು ಮೂರು ಮಹಾಸಾಗರಗಳು ಸೇರುವ ಕನ್ಯಾಕುಮಾರಿಯ ಕಡಲನ್ನು ಈಜಿ ತಮ್ಮ ತಪೋಭೂಮಿಯನ್ನು ತಲುಪುತ್ತಿದ್ದರು ಅಂತ ಕೇಳಿದಾಗ ನಿಜಕ್ಕೂ ವಿಶ್ವಾತ್ಮ ಜ್ಞಾನದ ಅರಿವು ವಿವೇಕರಿಗೆ ಖಂಡಿತಾ ಇದ್ದಿರಬೇಕು ಅನ್ನುವ ನಂಬಿಕೆ ಹುಟ್ಟುತ್ತದೆ..!!
ಈ ವಿಶ್ವಾತ್ಮ ದೃಷ್ಟಿಕೋನ ಹಾಗೂ ಅನಂತದ ಒಳಹೊಕ್ಕು ಪ್ರಪಂಚದ ವರ್ತನೆಯನ್ನು ಅರ್ಥ ಮಾಡಿಕೊಳ್ಳಬಲ್ಲ ಸಿದ್ದಿ ನಮ್ಮ ಭಾರತೀಯ ಮೂಲದ್ದು..!!
ಎಷ್ಟೋ ಕಾಲದ ಹಿಂದೆಯೇ ರಚನೆಯಾದ ಮಹಾಭಾರತದ ಗೀತೋಪನಿಷದ್ ಅಧ್ಯಾಯದಲ್ಲಿ ಇದರ ಉಲ್ಲೇಖವಿದೆ..!!
ಆದರೆ ಈ ವಿಶ್ವಾತ್ಮ ಕಥೆ ಅಥವಾ ಕಾಸ್ಮೋಟಿಸಂ ಅಥವಾ ಯುನಿವರ್ಸಲ್ ಕಾಸ್ಮಿಕ್ ಥಿಯರಿ ಅನ್ನುವ ಕಾನ್ಸೆಪ್ಟ್ ಅನ್ನು ಚೀನಾದವರೋ ಜಪಾನಿಯರೋ ತಮ್ಮ ಪ್ರಾಕ್ಟೀಸ್ ನಲ್ಲಿ ಬಳಸಿಕೊಂಡಾಗ ಅಥವಾ ಪಾಲೋ ಕೋಯೆಲೋರಂತಹ ಕೃತಿಕಾರ ದಿ ಆಲ್ ಕೆಮಿಸ್ಟ್ ನಂತಹ ಸುಪ್ರಸಿದ್ಧ ಗ್ರಂಥದ ಮೂಲ ಆಕರವನ್ನಾಗಿಸಿಕೊಂಡಾಗ ನಮಗೆ ಗ್ರೇಟ್ ಅನ್ನಿಸುತ್ತದೆ..
ಎಷ್ಟಾದ್ರೂ ಹಿತ್ತಲ ಗಿಡ ಮದ್ದಲ್ಲ ನೋಡಿ..!!
-ವಿಭಾ
ಯಾವ ಮನುಷ್ಯ ಪ್ರಪಂಚದ ಆತ್ಮವನ್ನು ಹೊಕ್ಕು ಅನಂತದಾಳವನ್ನು ಅಳೆಯುತ್ತಾನೋ ಆತ ಚಿರಂಜೀವಿಯಾಗಿ ಉಳಿಯುತ್ತಾನೆ..!!
ವಿಶ್ವಾತ್ಮದ ಚಿಂತನೆಗೈದ ಮೊದಲ ಪುರುಷ ಶ್ರೀಕೃಷ್ಣ.. ಅದನ್ನೇ ಕೃಷ್ಣ ಗೀತೆಯ ಮೂಲಕ ಅರ್ಜುನನಿಗೆ ಅರ್ಥ ಮಾಡಿಸಲು ಹೋಗುತ್ತಾನೆ.. ಆದರೆ ಕೃಷ್ಣನಿಗಿಂತ ಮುಂಚೆ ವಿಶ್ವಾತ್ಮ ಸಂಭವನೀಯತೆಯ ಅರಿವಿದ್ದಿದ್ದು ಸೂರ್ಯನಿಗೆ ಅನ್ನುವ ಪೌರಾಣಿಕ ನಂಬಿಕೆ ನಮ್ಮಲ್ಲಿದೆ..!!
ಹಿಮಾಲಯದಲ್ಲಿ ತಪಸ್ಸು ಮಾಡುವ ವಿಕ್ಷಿಪ್ತ ಸಾಧುಗಳಿಗೆ ಪ್ರಪಂಚದ ಆತ್ಮವನ್ನು ಅರಿಯುವ ಸಾಮರ್ಥ್ಯವಿದೆ ಅನ್ನುವವರಿದ್ದಾರೆ.. ದಕ್ಷಿಣೇಶ್ವರದ ಕಾಳಿಯ ಉಪಾಸಕ ರಾಮಕೃಷ್ಣ ಪರಮಹಂಸರಿಗೆ ಅನಂತ ವಿಸ್ತಾರದೊಳಕ್ಕೆ ಚಲಿಸಬಲ್ಲ ತಾಕತ್ತು ಇತ್ತಂತೆ..!!
ಅವರು ತಮ್ಮ ಪ್ರಿಯ ಶಿಷ್ಯ ನರೇಂದ್ರನಿಗೆ ಈ ದಿವ್ಯ ಜ್ಞಾನ ಉಪದೇಶಿಸಿದ್ರು ಅನ್ನುವುದನ್ನು ಕೇಳಿದ್ದೇನೆ. ಆದರೆ ವಿವೇಕಾನಂದರು ಮೂರು ಮೂರು ಮಹಾಸಾಗರಗಳು ಸೇರುವ ಕನ್ಯಾಕುಮಾರಿಯ ಕಡಲನ್ನು ಈಜಿ ತಮ್ಮ ತಪೋಭೂಮಿಯನ್ನು ತಲುಪುತ್ತಿದ್ದರು ಅಂತ ಕೇಳಿದಾಗ ನಿಜಕ್ಕೂ ವಿಶ್ವಾತ್ಮ ಜ್ಞಾನದ ಅರಿವು ವಿವೇಕರಿಗೆ ಖಂಡಿತಾ ಇದ್ದಿರಬೇಕು ಅನ್ನುವ ನಂಬಿಕೆ ಹುಟ್ಟುತ್ತದೆ..!!
ಈ ವಿಶ್ವಾತ್ಮ ದೃಷ್ಟಿಕೋನ ಹಾಗೂ ಅನಂತದ ಒಳಹೊಕ್ಕು ಪ್ರಪಂಚದ ವರ್ತನೆಯನ್ನು ಅರ್ಥ ಮಾಡಿಕೊಳ್ಳಬಲ್ಲ ಸಿದ್ದಿ ನಮ್ಮ ಭಾರತೀಯ ಮೂಲದ್ದು..!!
ಎಷ್ಟೋ ಕಾಲದ ಹಿಂದೆಯೇ ರಚನೆಯಾದ ಮಹಾಭಾರತದ ಗೀತೋಪನಿಷದ್ ಅಧ್ಯಾಯದಲ್ಲಿ ಇದರ ಉಲ್ಲೇಖವಿದೆ..!!
ಆದರೆ ಈ ವಿಶ್ವಾತ್ಮ ಕಥೆ ಅಥವಾ ಕಾಸ್ಮೋಟಿಸಂ ಅಥವಾ ಯುನಿವರ್ಸಲ್ ಕಾಸ್ಮಿಕ್ ಥಿಯರಿ ಅನ್ನುವ ಕಾನ್ಸೆಪ್ಟ್ ಅನ್ನು ಚೀನಾದವರೋ ಜಪಾನಿಯರೋ ತಮ್ಮ ಪ್ರಾಕ್ಟೀಸ್ ನಲ್ಲಿ ಬಳಸಿಕೊಂಡಾಗ ಅಥವಾ ಪಾಲೋ ಕೋಯೆಲೋರಂತಹ ಕೃತಿಕಾರ ದಿ ಆಲ್ ಕೆಮಿಸ್ಟ್ ನಂತಹ ಸುಪ್ರಸಿದ್ಧ ಗ್ರಂಥದ ಮೂಲ ಆಕರವನ್ನಾಗಿಸಿಕೊಂಡಾಗ ನಮಗೆ ಗ್ರೇಟ್ ಅನ್ನಿಸುತ್ತದೆ..
ಎಷ್ಟಾದ್ರೂ ಹಿತ್ತಲ ಗಿಡ ಮದ್ದಲ್ಲ ನೋಡಿ..!!
-ವಿಭಾ
No comments:
Post a Comment