Wednesday 22 July 2015

ನನಗನ್ನಿಸಿದ್ದು ಇಷ್ಟು ನೋಡಿ:


1. ನಿನಗೆ ಸಿಗಬೇಕು ಎಂದು ಬಯಸುವ ಪ್ರೀತಿ ನಿಮ್ಮೊಳಗೆ ಅಡಗಿರುತ್ತದೆ; ಅದನ್ನು ಯಾವ ಪ್ರಮಾಣದಲ್ಲಿ ನೀವು ಹೊರಗೆ ಹಂಚುತ್ತೀರೋ ಅಷ್ಟೇ ಪ್ರಮಾಣದಲ್ಲಿ ನಿಮಗೆ ತಿರುಗಿ ಲಭಿಸುತ್ತದೆ
***
2. ಎಲ್ಲಿಯವರೆಗೆ ನೀವು ನಡೆವ ದಾರಿ ಸತ್ಯವೆಂದು ಭಾವಿಸುತ್ತೀರೋ ಅಲ್ಲಿಯವರೆಗೂ ಜಗತ್ತು ಆ ಸತ್ಯದ ಪ್ರಾಮಾಣಿಕ ಪ್ರತಿನಿಧಿಯಾಗಿ ನಿಮಗೆ ಗೋಚರಿಸುತ್ತದೆ
***
3. ಸದಾ ಒಂದಿಲ್ಲೊಂದು ವಿಚಾರಗಳಿಗೆ ಕೊರಗುವವನು ಯಾವ ವಿಷಯಗಳನ್ನೂ ಸಮಾಧಾನದಿಂದ ಒಪ್ಪಲಾರ
***
4. ದೈಹಿಕವಾದ ಎಲ್ಲಾ ಸಂಬಂಧಗಳಿಗಿಂತ ಆತ್ಮದೊಂದಿಗೆ ಬೆರೆಯುವ ಸಂಬಂಧಗಳು ಬಹು ಸೂಕ್ಷ್ಮ ಹಾಗೂ ಮಹತ್ತರ
***
5. ನಿಮ್ಮಲ್ಲಿ ಎಷ್ಟೇ ಪಾಂಡಿತ್ಯವಿದ್ದರೂ, ನೀವು ಬುದ್ಧಿಗೇಡಿ ಅಲ್ಪರಿಗೆ ಜೈಕಾರ ಹಾಕುತ್ತಿದ್ದರೆ ನಿಮ್ಮ ಪಾಂಡಿತ್ಯಕ್ಕೆ ಬೆಲೆ ಇರುವುದಿಲ್ಲ
***
6. ಭರವಸೆ ಹಾಗೂ ಆಶಾವಾದ ಅನ್ನುವುದು ಜೀವನವೆಂಬ ಮರುಭೂಮಿಯಲ್ಲಿ ಅಲ್ಲಲ್ಲಿ ಕಂಡುಬರುವ ಒಯಾಸಿಸ್ನಂತಹ ನೀರಿನ ಚಿಲುಮೆಗಳಿದ್ದಂತೆ
7. ಕಳೆದುಕೊಂಡ ಇಂದಿನ ಸಂತೋಷವನ್ನು ನಾಳೆ ನೆನೆದು ಕೊರಗುವುದು ನಿಜವಾದ ಮೂರ್ಖತನ
***
8. ಆಗಾಗ ಅಚಾತುರ್ಯವಾಗುತ್ತಿದ್ದಾಗ ಮಾತ್ರ ಬದುಕಲ್ಲಿ ಹೊಸದೊಂದು ಆಯಾಮ ಆವಿಷ್ಕರಿಸಲು ಸಾಧ್ಯ
***
9. ಹೊಸ ನೀರು ಉಕ್ಕಿ ಹರಿಸಲು ಹಳೆಯ ನೀರನ್ನು ಹರಿಯಗೊಡಲೇಬೇಕು
***
10. ಬದುಕಿನಲ್ಲಿ ಸಂಭವಿಸುವ ನಿರಂತರ ಭಾವನಾತ್ಮಕ ಆಘಾತಗಳು ಎಂಥ ನಿರ್ಭಲ ಮನಸ್ಥಿತಿಯ ಜನರನ್ನೂ ಗಟ್ಟಿಗೊಳಿಸುತ್ತದೆ
***
11. ಬದುಕಿನಲ್ಲಿ ನೂರು ದಾರಿಗಳು ಬೇರೆ ಬೇರೆ ದಿಕ್ಕುಗಳಲ್ಲಿ ಸಾಗಿದರೂ ಆ ಎಲ್ಲಾ ದಾರಿಗಳ ಅಂತ್ಯ ಮಾತ್ರ ಸಾವು ಅನ್ನುವ ಒಂದೇ ದಿಕ್ಕಿನದ್ದಾಗಿರುತ್ತದೆ
***
12. ಸದಾ ಅಮಂಗಳ ನುಡಿಯುವ ನೂರು ಜನ ಆಪ್ತಮಿತ್ರರುಗಳಿಗಿಂತ ಅಪರೂಪಕ್ಕೊಮ್ಮೆ ನಿಮ್ಮ ತಾಕತ್ತಿನ ಬಗ್ಗೆ ಮೆಚ್ಚುಗೆ ಸೂಸುವ ಒಬ್ಬ ಬದ್ಧ ಶತ್ರು ಉತ್ತಮ
***
13. ಕಿವುಡನ ಬಳಿ ಕುಳಿತು ಸುದೀರ್ಘ ಉಪನ್ಯಾಸ ಬಿಗಿದರೂ ತೊಂದರೆಯಿಲ್ಲ; ಕುರುಡನ ಬಳಿ ಮಾರ್ಗದರ್ಶನ ಬೇಡದಿರಿ
-ವಿಭಾ
***

No comments:

Post a Comment