Tuesday 15 April 2014

ಸಮಾಧಿಯಿಲ್ಲದ ಸಾರ್ವಭೌಮ ಸರ್ದಾರ


ನಮ್ಮ ಎಲ್ಲಾ ಘತಿಸಿದ ನಾಯಕ ಶ್ರೇಷ್ಠರಿಗೆ ಸಮಾಧಿಯಿದೆ. ಎಕರೆಗಟ್ಟಲೆ ಸ್ಥಳದಲ್ಲಿ ನಿರ್ಮಿಸಲಾದ ಭವ್ಯ ಅಮೃತ ಶಿಲೆಯ ಗೊರಿಯಿದೆ. ಕಾಲಾಂತರದಲ್ಲಿ ಆ ಸಮಾದಿಗಳು ಯಾತ್ರಾ ಹಾಗೂ ಪ್ರವಾಸೋದ್ಯಮ ಸ್ಥಳಗಳಾಗಿವೆ. ಮಹಾತ್ಮ ಗಾಂಧೀ-ರಾಜ್ ಘಾಟ್, ನೆಹರು-ಶಾಂತಿ ವನ, ಇಂದಿರಾ ಗಾಂಧೀ-ಶಕ್ತಿ ಸ್ಥಳ, ಲಾಲ್ ಬಹಾದ್ದೂರ್ ಶಾಸ್ತ್ರಿ-ವಿಜಯ್ ಘಾಟ್, ಸ್ವತಂತ್ರ ಬಂದ ನಂತರ ನಮ್ಮ ನೇತಾಗಳಾದ ರಾಜೀವ್ ಗಾಂಧೀ-ವೀರಭೂಮಿ, ಗುಲ್ಜಾರಿಲಾಲ್ ನಂದ-ನರೇನ್ ಘಾಟ್, ಇವರುಗಳ ಮದ್ಯೆ ಒಂದು ತುಂಡು ನೆಲವೂ ಸಮಾಧಿ ಸ್ಥಳವಾಗಿ ಹೊಂದದ ಭಾರತದ ಉಕ್ಕಿನ ಮನುಷ್ಯ ಪಟೇಲರು. ಅವರನ್ನು ಅವರ ನೆನಪುಗಳನ್ನು ರಾಜಕೀಯವಾಗಿ ನೇಪಥ್ಯಕ್ಕೆ ಸರಿಸುವ ಕ್ರಮಬದ್ದ ಯೋಜನೆ ಕಾಂಗ್ರೆಸ್ಸ್ ಸಾಧಿಸಿದೆ. ಭಾರತ ಎಂದರೆ ಅದು ಕೇವಲ ನೆಹರು ವಂಶ ಮಾತ್ರ ಎನ್ನುವ ನಮ್ಮ ನಾಯಕರಿಗೆ ಪಟೇಲರ ಮೊನಚು ಮಾತುಗಳಾಗಲಿ, ಮಾತೃಭೂಮಿಯ ಭಗೆಗಿನ ದಿವ್ಯ ಕಾಳಜಿಯಾಗಲಿ ಅಥವಾ ನಿಸ್ವಾರ್ಥ ದೇಶ ಭಕ್ತಿಯಾಗಲಿ ಎಂದಿಗೆ ಅರ್ಥವಾದೀತು? ರಾಷ್ಟ್ರದ ವಿಲೀನಿಕರಣ ಮತ್ತು ಭಾಷಾವಾರು ಪ್ರಾಂತ್ಯಗಳ ರಚನೆಯ ಹಿಂದಿದ್ದ ಪಟೇಲರ ಅವಿರತ ಶ್ರಮ ಹಾಗೂ ಕಾಶ್ಮೀರದ ಹರಿಸಿಂಗ್ ವಿಚಾರದಲ್ಲಿ ಅವರು ತೆಗೆದುಕೊಂಡ ದಿಟ್ಟ ನಿರ್ಧಾರ ಸದಾ ಸ್ಮರಣೀಯ. ಭಾರತೀಯನಾದವನು ಎಂದಿಗೂ ಪಟೇಲರನ್ನು ಮರೆಯಭಾರದು. ಮತ್ತೆ ಹುಟ್ಟಿ ಬರಲಿ ಪಟೇಲರು ತಾಯಿ ಭಾರತಿಯ ಉದರದಲ್ಲಿ.
-ವಿಪ್ರವಿಶ್ವತ್(ವಿಶ್ವಾಸ್ ಭಾರದ್ವಾಜ್)

(31 ಅಕ್ಟೋಬರ್ 2012ರಂದು ಬರೆದಿದ್ದ ಕಿರು ಲೇಖನ-ಸರ್ದಾರ್ ಪಟೇಲರ ವ್ಯೆಕ್ತಿತ್ವ ಹಾಗೂ ಬಿರುಸುತನ ಕೆಲವು ದಿನ ನನ್ನ ಇಂಟರೆಸ್ಟಿಂಗ್ ಸಬ್ಜೆಕ್ಟ್ ಆಗಿತ್ತು)

ನೀವೂ ಪಾಲುದಾರರೇ

ನೀವು ಆಸ್ಥೆಯಿಂದ ಆಶಿರ್ವದಿಸುತ್ತಿದ್ದಿರಲ್ಲ ಅದುವೇ ಕರ್ನಾಟಕದ ಅತಿ ದೊಡ್ಡ ಗಣಿ ಹಗರಣದ ರೂವಾರಿ. ಆತ ಹೊರಗಿದ್ದಾಗ ನಿಮ್ಮನ್ನು ಬಳ್ಳಾರಿಗೆ ಕರೆದು ಕರೆದು ಚಿನ್ನದ ಕಿರೀಟ ತೊಡಿಸಿ, ಕೈಗೆ ಛತ್ರಪತಿ ಶಿವಾಜಿಯ ಕಡಗ ನೀಡಿ, ಹಾರ ತುರಾಯಿಗಳ ಮಹಾಭಿನಂದನೆ ಗೈದ. ಪಾಪ ಗಣಿ ಕುಣಿಕೆ ಕೊರಳಿಗೆ ಸುತ್ತಿಕೊಂಡಿತು ಜೈಲು ಪಾಲಾದ, ಅನಂತರ ಒಮ್ಮೆಯಾದರೂ ಅವನ ಬಗ್ಗೆ ಚಕಾರ ಹೊರಡಿಸಿದೀರಾ? ಗಣಿ ಅಕ್ರಮದಲ್ಲಿ ಕೇವಲ ಜನಾರ್ಧನ ರೆಡ್ಡಿ ಮಾತ್ರವಲ್ಲ ನೀವೆಲ್ಲರೂ ಪಾಲುದಾರರೆ!
- ವಿಪ್ರವಿಶ್ವತ್(ವಿಶ್ವಾಸ್ ಭಾರದ್ವಾಜ್)

{18 ಅಕ್ಟೋಬರ್ 2012ರಂದು ಆಗಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಕುರಿತಾಗಿ ಫೇಸ್‍ಬುಕ್‍ನಲ್ಲಿ ಟೀಕಿಸಿದ ಸಾಲು}

ಅಡಿಗ ಟ್ರಿಬ್ಯೂಟ್

ಕೋಟೆ ಗೋಡೆಗೆ ನಮ್ಮ ಹೆಣಗಳೇ ಮೆಟ್ಟಿಲು.
ನಮ್ಮ ಸಾವೇ ನೋವೆ ಹೊಸ ನಾಡ ತೊಟ್ಟಿಲು.
ಆದವು ಅಂಜುವೆದೆ ನಮ್ಮದಲ್ಲ
ಸೋಲುಭಗೆ ವೀರನಿಗೆ ಸಲ್ಲ ಹೊಲ್ಲ
                                            

-ಡಾ ಮೊಗೇರಿ ಗೋಪಾಲ ಕೃಷ್ಣ ಅಡಿಗ
(15 ಅಕ್ಟೋಬರ್ 2012ರಂದು ಫೇಸ್‍ಬುಕ್ ಗೋಡೆಗೆ ಅಂಟಿಸಿದ ಗೋಪಾಲಕೃಷ್ಣ ಅಡಿಗರ ಕಟ್ಟುವೆವು ನಾವು ಪದ್ಯದ ಪ್ಯಾರಾ-ನನ್ನನ್ನು ಅತಿಯಾಗಿ ಆಕರ್ಷಿಸಿದ ಚೈತನ್ಯಮಯ ಹಾಗೂ ವೀರರಸದ ಸಾಲುಗಳಿವು)

ಬ್ಲಾಗ್ ಪರಿಚಯ

ಬ್ಲಾಗ್ ಅಂತ ಸೃಷ್ಠಿ ಮಾಡಿ ಹಲವು ಕಾಲವೇ ಆಗಿ ಹೋಗಿತ್ತು. ಯಾಕೋ ಬ್ಲಾಗ್‍ನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕು ಅಂತ ಅನ್ನಿಸಿತು. ಕೂಡಲೆ ಎಂದೋ ಗೀಚಿದ್ದ ಹಚ್ಚ ಹಳೆಯ ಒಂದೆರಡು ಕವಿತೆಗಳನ್ನು ಬ್ಲಾಗ್‍ನ ಬಾಯಿಗೆ ತುರುಕಿದೆ...ಈಗ ಮತ್ತೊಂದೊ ಐಡಿಯಾ ಬಂದಿದೆ..ಈ ವರೆಗೆ ಫೇಸ್‍ಬುಕ್‍ನಲ್ಲಿ ಬರೆದಿದ್ದ ಕೆಲವು ಅನಿಸಿಕೆಗಳನ್ನು ಯಥಾವತ್ತಾಗಿ ನನ್ನ `ಮಾಧ್ಯಮವಿಶ್ವ' (ಬ್ಲಾಗ್)ದಲ್ಲಿ ಕಾಪಿ ಮಾಡಲು ಯೋಚಿಸಿದೆ. ಅದನ್ನು ಇನ್ನು ಮುಂದೆ ಕಾರ್ಯರೂಪಕ್ಕೂ ತರುತ್ತಿದ್ದೇನೆ. ಅಂದ ಹಾಗೆ ಈ ಹಿಂದೆ ಫೇಸ್‍ಬುಕ್‍ನಲ್ಲಿ ಗೀಚಿದ್ದ ಅಣಕು ಕುಣುಕುಗಳನ್ನು ಆಯಾ ಡೇಟ್ ಸಹಿತ ಇಲ್ಲಿ ನಕಲು ಮಾಡುತ್ತೆನೆ.
-ವಿಪ್ರವಿಶ್ವತ್(ವಿಶ್ವಾಸ್ ಭಾರಧ್ವಾಜ್)