Saturday 12 July 2014

ಚಿಕ್ಕಪ್ಪ ಅನ್ನುವ ಕಾದಂಬರಿಯ ಕುರಿತು

ಶಿವಮೊಗ್ಗದಲ್ಲಿ 'ಹಿಂದವಿ ಸ್ವರಾಜ್ಯ' ವಾರಪತ್ರಿಕೆ ಬಿಡುಗಡೆ ಮಾಡುವ ಮುನ್ನ ಉದ್ಘಾಟನೆಗೆ ಜಯಂತ್ ಕಾಯ್ಕಿಣಿ ಬರುತ್ತಾರೆನೋ ಎಂದು ಕೇಳಲು ಧೂರವಾಣಿ ಕರೆ ಮಾಡಿದ್ದೆ.
ಪತ್ರಿಕೆಯ ಮೂಲ ಆಶಯಗಳನ್ನು ಹೇಳಿದ ನಂತರ ಕಾಯ್ಕಿಣಿ, ಒಂದು ಮಾತನ್ನು ಹೇಳಿದ್ದರು, ಮಲೆನಾಡು ಹಾಗೂ ಕರಾವಳಿ ಪ್ರದೇಶಗಳಲ್ಲಿ ಧರ್ಮೀಯ ನೆಲೆಗಟ್ಟಿನಲ್ಲಿ ಅತ್ಯಂತ ವಿದ್ವಂಸಕ ಹಾಗು ಆತಂಕಕಾರಿ ಬೆಳವಣಿಗೆಗಳಾಗುತ್ತಿವೆ. ಕೊಂಚ ಈ ವಿಚಾರದಲ್ಲಿ ಮಾಧ್ಯಮಗಳು ಸೂಕ್ಷ್ಮವಾಗಿ ವರ್ತಿಸುವ ಅಗತ್ಯವಿದೆ ಎಂದಿದ್ದರು.
ಆಗ ಅದರ ತೀವ್ರತೆ ಹೇಗಿದ್ದಿರಬಹುದೆನ್ನುವ ಕಲ್ಪನೆ ಇರಲಿಲ್ಲ.
ಮೊನ್ನೆ ಜೋಗಿಯವರ 'ಚಿಕ್ಕಪ್ಪ' ಪುಸ್ತಕ ಓದಿದೆ.
ಒಬ್ಬ ಓದುಗನಾಗಿ ಉಪ್ಪಿನಂಗಡಿಯಲ್ಲಿ ಜರುಗಿದ ಪ್ರತಿ ಘಟನೆಗಳಿಗೂ ನಾನೇ ಮೂಖ ಸಾಕ್ಷಿಯಾಗಿದ್ದೆ ಎನ್ನುವಂತೆ ಭಾಸವಾಯಿತು. ಉಪ್ಪಿನಂಗಡಿಯ ಮೊದಲಿದ್ದ ವಾತಾವರಣ, ಜನಗಳ ಮನ ಸ್ಥಿತಿ,
ಬದಲಾಗುವ ಋತುಮಾನ ಅಂತೆಯೇ ಬದಲಾಗುವ ವಿದ್ಯಮಾನಗಳು
ಚಿಕ್ಕಪ್ಪ ಎನ್ನುವ ಅನಾಮಿಕನ ಆಗಮನ
ಚಿಕ್ಕಪ್ಪನ ನಿಗೂಡ ಸಂಚಾರದಿಂದ ಮೊದಮೊದಲು ಊರವರಲ್ಲಿ ಸಹಜವಾಗಿ ಮೂಡುವ ಕುತೂಹಲ ಮತ್ತು ಆತಂಕ
ಕಾಲಾಂತರದಲ್ಲಿ ಚಿಕ್ಕಪ್ಪ ಉಪ್ಪಿನಂಗಡಿಯಲ್ಲಿ ತ್ರಿವಿಕ್ರಮನಂತೆ ಬೆಳೆದು ನಿಲ್ಲುವ ಪರಿ
ಹಂತ ಹಂತವಾಗಿ ಚಿಕ್ಕಪ್ಪ ಎನ್ನುವ ಅನಾಮಧೇಯ ವ್ಯಕ್ತಿ ಉಪ್ಪಿನಂಗಡಿಯ ಸರ್ವವನ್ನು ಆವರಿಸಿಕೊಳ್ಳುವ ರೀತಿ
ಉಪ್ಪಿನಂಗಡಿ ಎನ್ನುವ ಸಾಂಸ್ಕೃತಿಕ ಸುಂದರಿ ಚಿಕ್ಕಪ್ಪನ ಖದರಿನ ಮುಂದೆ, ಜುಟ್ಟು, ಜನಿವಾರ ಕೊಟ್ಟು ಮಂಡಿಯೂರಿ ಶರಣು ಹೊಡೆಯುವ ಆಶ್ಚರ್ಯಕರ ಬದಲಾವಣೆ.
ಅಸಲಿಗೆ ಚಿಕ್ಕಪ್ಪ ಯಾರು? ನಾಯಕನಾ? ಖಳನಾಯಕನಾ? ಧರ್ಮ ರಕ್ಷಕನಾ? ಸಾಂಸ್ಕೃತಿಕ ರಾಯಭಾರಿಯಾ? ಸರ್ವಾಧಿಕಾರಿಯಾ? ಅವತಾರಪುರುಷನಾ?
ಇಡಿ ಪುಸ್ತಕದಲ್ಲಿ ಚಿಕ್ಕಪ್ಪನ ಸೊಗಸಾದ ಪರಾಕುಗಳಿವೆ
ಚಿಕ್ಕಪ್ಪನೆಂಬ ದ್ವಂದ್ವವಿದೆ, ಅರ್ಥವೇ ಆಗದ ಸಂದಿಗ್ದವಿದೆ, ಅರ್ಥ ಮಾಡಿಕೊಳ್ಳಲೇ ಬೇಕಾದ ಅನಿವಾರ್ಯತೆ ಇದೆ, ಕೊನೆಗೆ ಒಂದು ಸಲ ಚಿಕ್ಕಪ್ಪನ ಅದ್ಭುತ ವ್ಯೆಕ್ತಿತ್ವಕ್ಕೆ ಸಲಾಂ ಹೊಡೆಯಲೇಬೇಕೆನಿಸುತ್ತದೆ.
ಅಂತ್ಯದಲ್ಲಿ ಚಿಕ್ಕಪ್ಪನಂತಹ ಚಿಕ್ಕಪ್ಪ ಸಹ ದೈನ್ಯದ ಸ್ಥಿತಿಗೆ ತಲುಪುತ್ತಾನೆ. ಅದು ಹೇಗೆ? ನೀವು ಪುಸ್ತಕ ಓದಲೇಬೇಕು!
ಅಂದ ಹಾಗೆ ನಿಮಗೆ ಸೀತಾರಾಮ ಯರ್ಮುಂಜ, ರಜಾಕ್ ಡಾಕ್ಟರ್ ಇಷ್ಟ ಆಗಬಹುದು. ಪತ್ರಕರ್ತ ರಾಮಕೃಷ್ಣ ಕಾಮತ್ ಕೊಂಚ ಇಂಟೆರೆಸ್ಟಿಂಗ್ ಎನ್ನಿಸಬಹುದು.
'ಚಿಕ್ಕಪ್ಪ' ೨ ದಿನದಲ್ಲೇ ಮುಗಿದು ಹೋಯಿತು. ದುಡ್ಡು ಕೊಟ್ಟು ಕೊಂಡು ಸ್ವಲ್ಪ ದಿನ ಟೈಮ್ ಪಾಸ್ ಮಾಡಬಹುದು ಎಂದೆನಿಸಿದ್ದ ನನಗೆ ನಿರಾಸೆ ಆಯಿತು. ಜೋಗಿಗೆ ಅಭಿಮಾನದಿಂದ ಬಯ್ದುಕೊಂಡೆ.
-ವಿಶ್ವಾಸ್ ಭಾರದ್ವಾಜ್

(ಬಹಳ ಕಾಲದ ಹಿಂದೆ ಫೇಸ್​​ಬುಕ್​​ನಲ್ಲಿ ಬರೆದ ಜೋಗಿ ಯವರ ಕಾದಂಬರಿ ಚಿಕ್ಕಪ್ಪ ರೀವ್ಯೂ)

No comments:

Post a Comment