Wednesday 22 July 2015

ಕ್ಷಮಿಸಿ ಇದು ಬಾಹುಬಲಿಯ ವಿಮರ್ಷೆ ಅಲ್ವೇ ಅಲ್ಲ:

ಪಲ್ಲವರ ವಿರುದ್ಧ ಕದಂಬರು ಸಂಘಟನೆ ಕಟ್ಟಿ ಯುದ್ಧ ಮಾಡಿ ತಮ್ಮ ರಾಜ್ಯ ವಾಪಾಸು ಪಡೆಯುವ ಕಥಾನಕವೇ 'ಮಯೂರ' ಕಾದಂಬರಿ. ತರಾಸು ಬರೆದ ಈ ಐತಿಹಾಸಿಕ ಕಾದಂಬರಿ ಅಣ್ಣಾವ್ರು ಮನೋಜ್ಞವಾಗಿ ನಟಿಸಿ ಸೂಪರ್ ಹಿಟ್ ಆಯಿತು, ಭಾರತೀಯ ಚಿತ್ರರಂಗದಲ್ಲಿ ಮೈಲಿಗಲ್ಲು ಸಾಧಿಸಿತು..
ಅಮೀಶ್ ಪಟೇಲ್ ಬರೆದ 'ಮೆಲೂಹ', ಇತ್ತೀಚೆಗಿನ ಓದುಗರ ಗಮನ ಸೆಳೆದ ಶಿವನ ಕಥಾನಕ..ಮೆಲುಹದ ಅಂತ್ಯದಲ್ಲಿ ಕಾದಂಬರಿ ನಾಯಕ ನೀಲಕಂಠ ಚಂದ್ರವಂಶಿಗಳ ವಿರುದ್ಧ ಸೂರ್ಯವಂಶಿಗಳ ನೇತೃತ್ವ ವಹಿಸಿ ಯುದ್ಧಕ್ಕೆ ಹೋಗುತ್ತಾನೆ.. ನೀಲಕಂಠನ ಯುದ್ಧ ತಂತ್ರದಲ್ಲಿ ಹಣೆವ ವ್ಯೂಹವೇ ತ್ರಿಶೂಲ ವ್ಯೂಹ.. ಜೊತೆಗೆ ಒಮ್ಮೆಲೆ ಸಾಮೂಹಿಕವಾಗಿ ಶತ್ರುಗಳ ಮೇಲೆ ಸರಣಿ ಬಾಣ ಪ್ರಯೋಗ ಇದೇ ಕಾದಂಬರಿಯ ಕಥಾನಾಯಕನ ಯುದ್ಧನೀತಿಯ ವರ್ಣನೆಯಲ್ಲಿ ಉಲ್ಲೇಖವಾಗಿದೆ..
ತೆಲುಗಿನಲ್ಲಿ ಕೆಲವು ವರ್ಷಗಳ ಹಿಂದೆ ಬಿಡುಗಡೆಯಾದ ವಿಶಿಷ್ಟ ಪ್ರಯತ್ನ 'ಯುಗಾನಿಕಿ ಒಕ್ಕಡು' ಸಿನಿಮಾ..ಕಾರ್ತಿಕ್, ರೀಮಾಸೇನ್ ಮುಖ್ಯ ತಾರಾಗಣದಲ್ಲಿ ನಟಿಸಿದ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಇದು.. ಕ್ಲೈಮ್ಯಾಕ್ಸ್ ನಲ್ಲಿ ನಡೆಯುವ ಪಾಂಡ್ಯ ವಂಶಜರು ಹಾಗೂ ಚೋಳ ಸೈನಿಕರ ನಡುವಿನ ಯುದ್ಧದಲ್ಲಿ ಗುಡ್ಡದ ಮೇಲೆ ನಿಂತು ಚೋಳ ಸೈನಿಕರು ಕಲ್ಲುಬಂಡೆಗಳನ್ನೇ ಶಸ್ತ್ರಾಸ್ತ್ರಗಳಂತೆ ಬಳಸಿ ಯುದ್ಧಕ್ಕೆ ಮುಂದಾಗುತ್ತಾರೆ..
***
ಈಗ ವಿಷಯ ಅರ್ಥ ಮಾಡಿಕೊಳ್ಳಿ.. ಬಾಹುಬಲಿ ಚಿತ್ರದ ಸೂಕ್ಷ್ಮ ಕಥೆ 'ಮಯೂರ'ದ ನಕಲಿನಂತಿದೆ ಆದರೆ ಅದರ ಕನ್ ಕ್ಲೂಷನ್ ಭಾಗ 2ಕ್ಕೆ 2016ರ ವರೆಗೆ ಕಾಯಬೇಕು..
ಬಾಹುಬಲಿ ಚಿತ್ರದ ಉತ್ತರಾರ್ಧದ ಯುದ್ಧದಲ್ಲಿ ಬಳಸಿಕೊಂಡ ತ್ರಿಶೂಲ ವ್ಯೂಹ ಹಾಗೂ ಬುಡಕಟ್ಟು ಸಮುದಾಯದ ಕಥಾನಾಯಕ (ಶಿವುಡು), ಅಮೀಶ್ ರ ಮೆಲೂಹ ಶಿವ ಸರಣಿಯಿಂದ ಪ್ರೇರಿತವಾದಂತಿದೆ.. (ಅಮೀಶ್ ರ ಮೆಲೂಹ, ಸೀಕ್ರೆಟ್ ಆಫ್ ನಾಗಾ ಹಾಗೂ ವೂಥ್ಸ್ ಆಫ್ ವಾಯುಪುತ್ರ ಕಾದಂಬರಿಗಳು ಶುದ್ಧಿ ಅನ್ನುವ ಬಾಲಿವುಡ್ ಚಿತ್ರವಾಗುತ್ತಿದೆ)
ಯುದ್ಧದ ದೃಶ್ಯದಲ್ಲೇ ಕಲ್ಲುಬಂಡೆಯನ್ನು ಶತ್ರು ಪಾಳೆಯದ ಮೇಲೆ ತೂರಿ ಬಿಡುವುದು 'ಯುಗಾನಿಕಿ' ಒಕ್ಕಡು ಚಿತ್ರದಿಂದ ಎರವಲು ಪಡೆದಂತಿದೆ..
ಉಳಿದಂತೆ ಚಿತ್ರದ ಮಾಹಿಷ್ಮತಿ ಸಾಮ್ರಾಜ್ಯದ ಸೆಟ್ಟಿಂಗ್ಸ್ ಹಾಲಿವುಡ್ ನ 'ಗೇಮ್ಸ್ ಆಫ್ ಥ್ರೋನ್' ಸರಣಿಯಿಂದ ಕಾಪಿ ಮಾಡಿದಂತಿದೆ..
'ಕಾಲಕೇಯ' ಅನ್ನುವ ರಾಕ್ಷಸನ ಸೈನ್ಯದೊಂದಿಗೆ ನಡೆವ ಮಹಾಯುದ್ಧ ಲಾರ್ಡ್ ಆಫ್ ರಿಂಗ್ಸ್ ಹಾಲಿವುಡ್ ಚಿತ್ರವನ್ನು ಕದ್ದು ಬಳಸಿಕೊಂಡಂತಿದೆ..
***
ಯಾರಿಗೂ ಗೊತ್ತಾಗದಂತೆ ಕದಿಯುವ ಕಲೆ ಗೊತ್ತಿರೋನೆ ಸೃಜನಾತ್ಮಕ ನಿರ್ದೇಶಕ.. ಇದು ಕಟು ವಿಮರ್ಷೆಯೋ, ವ್ಯಂಗ್ಯವೋ ಅಲ್ಲ.. ರಾಜಮೌಳಿ ಅನ್ನುವ ಟ್ರೆಂಡ್ ಸೆಟ್ಟರ್ ಡೈರೆಕ್ಟರ್ ಆಗಬೇಕು ಅನ್ನೋದಾದ್ರೆ ದೃಷ್ಟಿಕೋನ ವಿಸ್ತಾರವಾಗಿರಬೇಕು.. ಹತ್ತು ಚಿತ್ರಗಳ ಅಂಗಗಳನ್ನು ಕದ್ದು ಒಂದೇ ಬೇಸನ್ ನಲ್ಲಿ ಹುರಿದು, ಬೇಯಿಸಿ, ಕುದಿಸಿ, ಕಾಯಿಸಿ ಉಂಡೆ ಮಾಡಿ ತಟ್ಟೆಯಲ್ಲಿಟ್ಟು ಕೊಟ್ಟರೂ ಜನ ಅದನ್ನು ಮೆಚ್ಚಿ ಬಹುಪರಾಕ್ ಹೇಳುತ್ತಾರೆ ಅನ್ನೋದಾದ್ರೆ, ಅದರ ಹಿಂದೆ ಇರಬಹುದಾದ ಶ್ರದ್ಧೆ ಹಾಗೂ ಕದ್ದ ವಸ್ತುಗಳನ್ನು ಸಲೀಸಾಗಿ ರೀಜನಾಲಿಟಿ ಹಾಗೂ ರಿಯಾಲಿಟಿಗೆ ಸಮನಾಗಿ ಫಿಕ್ಷನ್ ಗೆ ಜೋಡಿಸುವ ಕಲೆ ಸಿದ್ಧಿಸಿರಬೇಕು..
ಐ ಬಿಲೀವ್ ಈ ಸೂಪರ್ ಸ್ಪೆಷಾಲಿಟಿ ಆರ್ಟ್ ರಾಜಮೌಳಿ, ಶಂಕರ್, ಪುರಿ ಜಗನ್ನಾಥ್ ರಂತಹ ನಿರ್ದೇಶಕರಿಗೆ ಚೆನ್ನಾಗಿಯೇ ಒಲಿದಿದೆ..
***
ವಿ.ಸೂ: ಮತ್ತೆ ಸ್ಪಷ್ಟಪಡಿಸ್ತಿದ್ದೀನಿ ಇದು ಬಾಹುಬಲಿ ನೋಡಿದ ನಂತರ ನನಗನ್ನಿಸಿದ್ದೇ ವಿನಃ ಯಾವ ವಿಮರ್ಷೆಯೂ ಅಲ್ಲ
-ವಿಭಾ
***

No comments:

Post a Comment