Sunday 9 November 2014

ಕೃಷ್ಣ ಪರಿಪೂರ್ಣತೆಯ ಸಂಕೇತ



ಕೃಷ್ಣ ಪರಿಪೂರ್ಣತೆಯ ಸಂಕೇತ..!
ಕೃಷ್ಣನಲ್ಲಿ ಏನಿಲ್ಲ..?
ಕೃಷ್ಣ ಎಲ್ಲವೂ ಹೌದು!
ಬುದ್ದಿವಂತಿಕೆ, ಚಾಣಾಕ್ಷತನ, ಸಮಯ ಪ್ರಜ್ಞೆ, ಅಂತಃಸತ್ವ, ಮೇಧಾವಂತಿಕೆ, ಭಾವ ಸಾಗರ, ರಾಜಕಾರಣ, ಕುಶಾಗ್ರಮತಿ,,,,,
ಪ್ರೇಮ, ಸರಸ, ಬಂಧ, ಲಾಲಿತ್ಯ, ಲಾಸ್ಯ,,,,
ನಿರಂಕುಶತ್ವ, ಸರ್ವಾಧಿಕಾರ, ಕಾಲ, ನಿಯತಿ, ಸ್ಥಿತಿ,,,,
ಕಾರ್ಯ ಕಾರಣ ಕಾಯ,,,
ಯಕ್ಷ, ಕಿನ್ನರ, ಕಿಂಪುರುಷ, ಗಂಧರ್ವ, ನಾಗ,
ಯಶೋಧೆ ಮಡಿಲು ತುಂಬಿದ ನಂದ ಕಂದ
ದ್ವಾಪರ ಬೆಳಗಿದ ದ್ವಾರಕೆ ಕಟ್ಟಿದ
ಪಲಾಯನಕ್ಕೂ ವ್ಯಾಖ್ಯಾನ ನೀಡಿದ
ರಾಧೆಯೊಡಲ ವಿರಹದುರಿಯ ಶಮನ ಮಾಡಿದ,
ಗೋವಿನ ಸಾನಿಧ್ಯದಲ್ಲಿ ಜನನಿಯ ಕಂಡ
ಪೂತನಿ ಮೊಲೆಯಲಿ ಅಮೃತ ಉಂಡ
ಮುರುಳಿ ನುಡಿಸಿ ಪ್ರಕೃತಿ ಮಾರ್ಧನಿಸಿದ
ಜಗತ್ತಿಗೆ ಮಾರ್ಗದರ್ಶನ ಮಾಡಿದ ಗೀತಾಚಾರ್ಯ,
ಕುರುಕ್ಷೇತ್ರದ ಜಗನ್ನಾಟಕ ರಚಿಸಿದ ನಿರ್ದೇಶಕ,
ಅಂಧಕಾರದ ಸಮಾಜಕ್ಕೆ ಪ್ರಕಾಶ ಧಾರೆ ಎರೆದ ಜಗದ್ಗುರು,
ಮಾಯಾವಿ, ಅಸುರ, ಮೋಸಗಾರ, ತಂತ್ರಗಾರ ಅನ್ನುವ ಕಳಂಕಿತ,
ದೃತರಾಷ್ಟ್ರನ ಮೃತ್ಯು ಅಪ್ಪುಗೆಯಿಂದ ಭೀಮನ ಉಳಿಸಿದ ಚಾಣಾಕ್ಯ,
ಪಾಂಚಜನ್ಯ ಮೊಳಗಿಸಿ ಅಧರ್ಮ ನಿಗ್ರಹಿಸಿದ,
ಸುದರ್ಶನ, ಕೌಮೇದಿನಿಗಳಿದ್ದರು ನಿಃಶಸ್ತ್ರನಾಗಿ 18 ದಿನದ ಕದನ ನಿರೂಪಿಸಿದ
ಗಾಂಧಾರಿಯ ಉಗ್ರ ಶಾಪವನ್ನುಂಡರೂ ನಸು ನಗುತ್ತಲೆ ನಿರ್ಯಾಣ ಹೊಂದಿದ,
-ವಿಶ್ವಾಸ್ ಭಾರದ್ವಾಜ್

No comments:

Post a Comment