Sunday 9 November 2014

ನಿಮ್ಮನ್ನು ಮಾಸ್ಟ್ರೇ ಅನ್ನಲು ಅಭ್ಯಂತರವೇನಿಲ್ಲ. ಆದ್ರೆ...?

ಪ್ರಾಯಶಃ ನನಗೆ ನೆನಪಿರುವಂತೆ ನಾನು ಅನಂತಮೂರ್ತಿಯವರನ್ನು ಮೊದಲ ಬಾರಿಗೆ ನೋಡಿದ್ದು ಬುದ್ದಿ ಬೆಳೆಯುತ್ತಿರುವ ಮೊದಲ ಹಂತದಲ್ಲಿ, ಆಗ ಹೆಚ್ಚು ವಿರೋದಾಭಿಪ್ರಾಯಗಳಿರಲಿಲ್ಲ ಜೊತೆಗೆ ಅನಂತಮೂರ್ತಿಯವರ ಪುಸ್ತಕಗಳನ್ನೂ ಓದಿರಲಿಲ್ಲ. ಅದು ನೀನಾಸಂ ಸಂಸ್ಕ್ರತಿ ಉತ್ಸವ ಅಂತ ಕಾಣಿಸುತ್ತೆ..‘ನಾಡಿನ ಸಾಹಿತ್ಯದಲ್ಲಿ ಸಾಕ್ಷಿ ಪ್ರಜ್ಞೆಯನ್ನು ಹಿಡಿದಿಟ್ಟುಕೊಂಡವರು ಅಡಿಗರು' ಅಂತ ಅನಂತ ಮೂರ್ತಿಯವರು ಹೇಳಿದ ಮೇಲೆಯೇ ಅಡಿಗರ ಪದ್ಯಗಳನ್ನು ನಾನು ಓದಲು ಶುರು ಮಾಡಿದ್ದು, ಆಮೇಲೆಯೇ ಅವು ಕೊಂಚ ಅರ್ಥವಾಗಿ ನನಗೆ ಆಪ್ತವಾಗಿದ್ದು..
ಕೆಲ ಕಾಲದ ಬಳಿಕ ಶಿವಮೊಗ್ಗದಲ್ಲಿ ಮತ್ತೊಂದು ಗೋಷ್ಠಿಯಲ್ಲಿ ಅನಂತ ಮೂರ್ತಿಯವರ ಆಶಯ ಭಾಷಣ..(ವೈಚಾರಿಕ ತಲ್ಲಣಗಳ) ಬಗ್ಗೆ ಕೇಳಿದ ಮೇಲೆ ಅಡಿಗರ ಬಳಿಕ ಶೂನ್ಯವಾಗಿದ್ದ ನಾಡಿನ ಸಾಕ್ಷಿ ಪ್ರಜ್ಞೆ ಅಡಿಗರ ಶಿಷ್ಯ ಅನಂತ ಮೂರ್ತಿಯವರು ತುಂಬುತ್ತಾರಾ ಅನ್ನಿಸಿತು..
ಅದೇ ಕಾರಣದಿಂದ ಅವರ ಘಟಶ್ರಾದ್ಧ ಓದಿದೆ..ನಾನು ಮೊದಲು ಓದಿದ ಯು.ಆರ್.ಎ ಪುಸ್ತಕವೇ ಅದು..ಕೆಲ ಸಮಯದಲ್ಲೇ ಸಂಸ್ಕಾರ, ಭಾರತೀಪುರ, ಅವಸ್ಥೆ, ಪಣಿಯಮ್ಮ, ಬರ, ವಾಲ್ಮಿಕಿಯ ನೆವದಲ್ಲಿ, ಹೀಗೆ ಹತ್ತು ಹಲವು ಪುಸ್ತಕಗಳನ್ನು ತಂದಿಟ್ಟುಕೊಂಡು ಹಠಕ್ಕೆ ಬಿದ್ದವನಂತೆ ಓದಿದೆ..ಆಗ ಅನಂತ ಮೂರ್ತಿಯವರು ಸಾಹಿತ್ಯಕ್ಕೂ ಮೀರಿ ವಿವಾದ ಸೃಷ್ಟಿಸಿಕೊಳ್ಳುತ್ತಿದ್ದರು..
ಆಗ ನಿಜವಾಗಿಯೂ ಅನ್ನಿಸಿದ್ದು ಈ ಮನುಷ್ಯನಲ್ಲಿ ಇಬ್ಬರು ವ್ಯೆಕ್ತಿಗಳಿದ್ದಾರೆ..ಎರಡು ಬೌದ್ಧಿಕ ಸಂಘರ್ಷಗಳು ನಡೆಯುತ್ತವೆ..
ಬರೆಯುವ ಅನಂತ ಮೂರ್ತಿಯೇ ಬೇರೆ, ಮಾತನಾಡುವಾಗ ವಿತಂಡವಾದ ಬೆರೆಸುವ ಅನಂತಮೂರ್ತಿಯೇ ಬೇರೆ..ಮಾತಿಗೂ ಕೃತಿಗೂ ಸಂಬಂಧವೇ ಇಲ್ಲದ ಇವರಿಗೆ ಜ್ಞಾನಪೀಠ ಹೇಗೆ ಸಿಕ್ತಪ್ಪ ಅನ್ನಿಸಿತ್ತು..ಆದರೆ ಅನಂತಮೂರ್ತಿಯವರ ಪುಸ್ತಕಗಳಲ್ಲಿದ್ದ ಸಂವೇದನೆಗಳ ಹ್ಯಾಂಗ್ ಒವರ್ ಕಾಡದೆ ಇರ್ತಿರಲಿಲ್ಲ..
ಎನಿ ಹೌ! ಅನಂತಮೂರ್ತಿ ಮತ್ತೆ ನಮ್ಮ ನಾಡಲ್ಲೇ ಹುಟ್ಟಲಿ ಆದರೆ ಕೇವಲ ಬರೆಯುವ ಅನಂತಮೂರ್ತಿಯಾಗಿ ಮಾತ್ರ ಹುಟ್ಟಲಿ..ಅವರಲ್ಲಿದ್ದ ಮಾತಾಡಿ ಮುಖ ಕೆಡಿಸಿಕೊಳ್ತಿದ್ದ ಅನಂತಮೂರ್ತಿ ಶಾಶ್ವತವಾಗಿ ನಾಶವಾಗಲಿ...
-ವಿಶ್ವಾಸ್ ಭಾರದ್ವಾಜ್

No comments:

Post a Comment