Sunday 9 November 2014

ನಿನ್ನೋಳು ನಾ. ನನ್ನೊಳು ನೀ

 
ಗೆಳೆಯ ಹರೀಶ್ ಎಚ್ಚರಿಕೆ ಬೆರೆತ ಆಮಂತ್ರಣ ನೀಡಿದ್ದ, ಹೋಗದೇ ವಿಧಿ ಇರಲಿಲ್ಲ. ಬಹಳಷ್ಟು ದಿನಗಳಿಂದ ಮನಸಿಗೆ ಮುದ ನೀಡುವ ನಾಟಕವೊಂದನ್ನು ನೋಡಿರಲೇ ಇಲ್ಲ. ಸಾಕಷ್ಟು ಪ್ರೌಢ ಸಂಗತಿಗಳನ್ನು ಹುಟ್ಟು ಹಾಕುವ ನಾಟಕ "ನನ್ನೊಳು ನೀ, ನಿನ್ನೊಳು ನಾ "
ಎರಡೇ ಪಾತ್ರಗಳು ಆದಿಯಿಂದ ಕೊನೆಯವರೆಗೂ ಪ್ರೇಕ್ಷಕರನ್ನು ಹಿಡಿದು ಕೂರಿಸುವಲ್ಲಿ ಬಹುತೇಕ ಸಫಲವಾಗಿದೆ. ಈ ವಿಷಯದಲ್ಲಿ ಅವನಾದ ಅವಿನಾಶ್ ಹಾಗು ಅವಳಾದ ಪ್ರಿಯ ನಟನ ಯಶಸ್ವಿಯಾದ್ರು.. ಅಭಿನಯ ಹಾಗೂ ಅಭಿವ್ಯಕ್ತಿ ಎರಡೂ ಪಕ್ಕಾ ಪ್ರೋಫೇಶನಲ್ ಅನ್ನಿಸಿತು.
ರಂಗ ಸಜ್ಜಿಕೆ, ಬೆಳಕು, ಕಥಾ ವಿಸ್ತರಣೆ, ಪಾತ್ರಗಳಲ್ಲಿ ಸನ್ನಿವೇಶಗಳ ನಿರೂಪಣೆ ಎಲ್ಲವೂ ಅಚ್ಚುಕಟ್ಟಾಗಿ ಮೂಡಿಬಂತು..
ನಾಟಕವೇನೋ ಮುಗಿಯಿತು. ಆದ್ರೆ ಪ್ರೇಕ್ಷಕರ ಮನಸಿನಲ್ಲಿ ಇನ್ನೊಂದು ದೃಶ್ಯ ಉಳಿದಿದೆಯೇನೋ ಅನ್ನುವಷ್ಟರಮಟ್ಟಿಗೆ ಅದರ ಮುಂದುವರಿಕೆ ಇತ್ತು.
ಈಗ ಕಾಡುತ್ತಿರುವ ಅಸಂಖ್ಯ ಪ್ರಶ್ನೆಗಳಲ್ಲಿ ಕೆಲವು ವಾಸ್ತವದ ಸೈದ್ದಾಂತಿಕ ಚೌಕಟ್ಟಿಗೆ ಸೇರುತ್ತವೇ.
ಯಾರು ಸರಿ? ಅವನಾ...? ಅವಳಾ...?
ಯಾವುದು ಸರಿ.....? ಸ್ವಾತಂತ್ರವಾ...? ಸ್ವೇಚ್ಛೆಯಾ...?
ಬ್ರಾಹ್ಮಣರ ಹೆಣ್ಣು ಮಗಳು ಆಧುನಿಕತೆಯ ಸೋಗಿನಲ್ಲಿ ಸಿಗರೇಟು ಸೇದುವುದು, ಹೆಂಡ ಕುಡಿಯುವುದು, ಚಿಕನ್ ತಿನ್ನುವದು ಅಥವಾ ಸಂಪ್ರಧಾಯದ ಸಮಾಜಿಕ ಪರಂಪರೆಯನ್ನು ಧಿಕ್ಕರಿಸಿ,ಅದನ್ನೇ ಸ್ತ್ರೀ ಸ್ವಾತಂತ್ರ, ಪುರುಷ ಪ್ರದಾನ ಸಮಾಜದ ಜೊತೆಗಿನ ಸಮಾನತೆ ಅಂದುಕೊಳ್ಳುವುದು ಎಷ್ಟು ಸೂಕ್ತ...?
ಮೇಲ್ನೋಟಕ್ಕೆ ಸಂಪ್ರದಾಯದ ಕಟ್ಟಾ ವಿರೋಧಿ ಅನ್ನುವ ಸೋಗು ಹಾಕುವ ಮುಖವಾಡದಾರಿ ಅವನು.. ಸಂಪ್ರದಾಯದ ಅನಿವಾರ್ಯತೆಯ ನಟನೆ, ಹೆಂಡತಿ ಮೇಲೆ ತೋರಿಕೆಯ ಪ್ರೀತಿ, ಮನಸಿನಲ್ಲಿ ಸಂಶಯದ ಮೂಟೆ. ಸ್ವಾತಂತ್ರ ಕೊಡುತ್ತೇನೆ ಆದರೆ ನಾನು ಕೊಟ್ಟ ಸ್ವಾತಂತ್ರದ ಲೆಕ್ಕ ಕೊಡು ಅನ್ನುವ ಧೋರಣೆ..
ಅವಳ ಮನಸ್ಸಿನಲ್ಲಿ ಹಳೇಯ ಪ್ರೇಮಿಯ ಸ್ಮ್ರತಿ, ಹೊಸ ಬದುಕಿನ ಅಸಮ್ಮತ ಆ
ಲಿಂಗನ..
ಅವನಿಗೆ ಅವಳು ಕೇವಲ ಪಾತ್ರದಂತೆ ಬದಲಾಗಬೇಕಾದ ಕಲಾವಿದೆ.
ಅವನು ಅವಳಾಗಲೂ ಇಲ್ಲ, ಅವಳನ್ನು ಅರ್ಥ ಮಾಡಿಕೊಳ್ಳಲೂ ಒಲ್ಲ.
ಗಂಡಿನ ಅಹಂ, ಹೆಣ್ಣಿನ ಸ್ವಾಭಿಮಾನವನ್ನು ನಾಟಕದಲ್ಲಿ ಕಟ್ಟುವ ಪ್ರಯತ್ನ ಮಾಡಲಾಗಿದೆ.. ವಾಸ್ತವದ. ಜೀವಂತಿಕೆ ತುಂಬುವ ಸಫಲ ಯತ್ನವಿದೆ. ನಾಟಕದುದ್ದಕ್ಕೂ ಲಘು ಹಾಸ್ಯ ತುಂಬಿ ಹರಿಯುತ್ತದೆ.
ಅವಿನಾಶ್ ರ ಸಂಭಾಷಣೆ, ನಿರ್ದೇಶನ ಮೆಚ್ಚುವಂತದ್ದು.
ಪ್ರಿಯ ನಟನ ಎಲ್ಲಿಯೂ ಓತಪ್ರೇತವಾಗದಂತೆ ತನ್ನ ಪಾತ್ರವನ್ನು ಸರಿದೂಗಿಸಿಕೊಂಡು ಹೋಗಿದ್ದಾಳೆ.
ಒಂದು ಒಳ್ಳೆಯ ಸಾಯಂಕಾಲ ಕೊಟ್ಟಿದ್ದಕ್ಕೆ ಗೆಳೆಯ ಹರೀಶ್ ಗೆ, ನಾಟಕದ ತೆರೆಯ ಮುಂದಿನ ಹಾಗೂ ತೆರೆಯ ಹಿಂದಿನ ಎಲ್ಲಾ ಗೆಳೆಯರಿಗೆ ಧನ್ಯವಾದ...
-ವಿಶ್ವಾಸ್ ಭಾರದ್ವಾಜ್

No comments:

Post a Comment