Sunday 9 November 2014

ನನಗೆ ಸರ್ಟಿಫಿಕೇಟ್ ಅಗತ್ಯವಿಲ್ಲ

ಯಾರೋ ಒಂದಿಬ್ಬರು ನಾನು ನಿತ್ಯ ಪ್ರಾತರ್ವಂಧನೆ ಸಂಧ್ಯಾವಂದನೆ ಮಾಡೋದಿಲ್ಲ ಅನ್ನೋದನ್ನು ಹೀಯಾಳಿಸಿ ಮಾತಾಡಿದ್ದನ್ನು ಫೇಸ್ ಬುಕ್ ಗೋಡೆಯ ಮೇಲೆ ಬರೆಯುವ ದರ್ದು, ಅಗತ್ಯ-ಅನಿವಾರ್ಯತೆ ಖಂಡಿತಾ ನನಗಿರಲಿಲ್ಲ.. ಆದರೆ ಅದನ್ನು ಅಂಟಿಸಿದ್ದ ಕಾರಣ ನನಗೆ ಮಾತ್ರ ಗೊತ್ತು... ಹಿಂದವೀ ಸ್ವರಾಜ್ಯ ಅನ್ನುವ ಪತ್ರಿಕೆ ಮಾಡಹೊರಟಾಗ ನನ್ನ ಬಲಪಂಥೀಯ ಅಂತ ತೆಗಳಿದ್ರು. ಇನ್ನು ಕೆಲವರು ಮುಂದೆ ಕೆಲವು ಸಂದರ್ಭದಲ್ಲಿ ಎಡಪಂಥೀಯ ಅಂತ ಜರಿದಿದ್ದೂ ಇದೆ.ನಾನು ಅನಂತಮೂರ್ತಿ ಪುಸ್ತಕ ಓದಿದ್ರೆ ಬಲಪಂಥೀಯರಿಗೆ ಬಿಕ್ಕಟ್ಟು, ಬೈರಪ್ಪನವರ ಪುಸ್ತಕದ ಬಗ್ಗೆ ರೀವ್ಯೂ ಬರೆದ್ರೆ ಎಡ ಪಂಥಿಯರ ಕಣ್ಣು ಕೆಂಡ. ಅಸಲಿಗೆ ನಾನು ಯಾರು..? ನನ್ನ ಧೋರಣೆಗಳಾದ್ರೂ ಯಾವ ಸೈದ್ಧಾಂತಿಕ ನೆಲಗಟ್ಟಿಗೆ ಸೇರಿದವು..?
ನಾನು ಸಾಮಾನ್ಯ ಓದುಗ....! ಎಲ್ಲರನ್ನೂ, ಎಲ್ಲವನ್ನೂ ಓದುವ ಸಾಹಿತ್ಯದ ವಿದ್ಯಾರ್ಥಿ. ಯಾವ ತಾರತಮ್ಯವನ್ನೂ ಮಾಡದೇ, ಯಾವ ಪಂಥ, ಪಕ್ಷ, ಬಣಗಳಿಗೂ ಸೇರದ ಪತ್ರಕರ್ತ.. of course ಪತ್ರಕರ್ತ ಹೀಗೆ ಇರಬೇಕು ಅಂತ ಬಯಸುವ ಸಮರ್ಥಿಸುವ ಸಾಧಾರಣ ಆಮ್ ಆದ್ಮಿ.. A Common Man (mango MAN)
ಸಂಪ್ರಧಾಯಗಳು ಇಟ್ಟು ಪೂಜಿಸುವ ದೈವವೂ ಅಲ್ಲ ಸುಟ್ಟು ಹಾಕುವ ಹೆಣವೂ ಅಲ್ಲ ಅನ್ನೋದು ನನ್ನ ಖಾಸಗಿ ಅಭಿಪ್ರಾಯ... ಅಂದರೆ ಈ ಸಂಪ್ರದಾಯಗಳು ನಮ್ಮ ಮಧ್ಯೆದಲ್ಲೇ ಉಸಿರಾಡುವ ಅನಿವಾರ್ಯತೆ ಎಂದರ್ಥ. ನನ್ನ ಕುಟುಂಬವೇ ಪುರೋಹಿತರ ಸಮೂಹ. ನಾನು ಸಂಧ್ಯಾವಂದನೆ ಮಾಡೋದಿಲ್ಲ ಅಂದ ಮಾತ್ರಕ್ಕೆ ಸಂಧ್ಯಾವಂದನೆ ಮಾಡೋರು ನನ್ನ ದೃಷ್ಟಿಯಲ್ಲಿ ವಿಲನ್ ಗಳು ಅಂತ ಅರ್ಥವಲ್ಲ. ಸಂಪ್ರದಾಯಗಳ ಹಿಂದಿನ ಶ್ರದ್ಧೆಯನ್ನು ನಾನು ಪೂರ್ಣ ಮನಸ್ಸಿನಿಂದ ಗೌರವಿಸ್ತೀನಿ..ನಾನು ಆಸ್ತಿಕವಾದವನ್ನು ಗೌರವಸ್ತೀನಿ.ಸಂಪ್ರದಾಯಗಳ ಜೊತೆಯಲ್ಲಿ ಬೆಳೆವ ಸಂಸ್ಕ್ರತಿ, ಜನಪದವನ್ನು ಮೆಚ್ಚುತ್ತೀನಿ. ಜಗನ್ಮಾತೆ ನನ್ನ ಆರಾಧ್ಯ ದೈವ.. ಒಂದು ಕಾಲದಲ್ಲಿ ಅಮ್ಮನ ಇಚ್ಛೆ ಪೂರೈಸಬೇಕು ಅನ್ನುವ ಒಂದೇ ಕಾರಣದಿಂದ ರುದ್ರ,ಚಮಕ, ಶ್ರೀ ಸೂಕ್ತ,ಪುರುಷ ಸೂಕ್ತ,, ಗಣಪತಿ ಅಥರ್ವಶೀರ್ಷ ಕಲಿತಿದ್ದೂ ಇದೆ. ಕೇವಲ ಅಮ್ಮನ ಸಮಾಧಾನಕ್ಕಾಗಿ ಅಪೂರ್ವಕ್ಕೆ ಸಂಧ್ಯಾವಂದನೆ ಮಾಡೋದಿದೆ.
ನನಗೆ ಯಾರ ಸರ್ಟಿಫಿಕೇಟ್ ಅಗತ್ಯವೂ ಇಲ್ಲ... ಈ ಸಾಮಾಜಿಕ ಜಾಲತಾಣಗಳಲ್ಲಿ ಯಾವ ಬಂಧುಗಳು ಹೇಗೆ ಅಭಿಪ್ರಾಯ ವ್ಯಕ್ತಪಡಿಸ್ತಾರೆ ಅಂತ ತಿಳಿಯುವ ಕುತೂಹಲ ಇತ್ತು. ಕೆಲವರು ಕಾಮೆಂಟ್ ಮಾಡಿದ್ರು.. ಕೆಲವರು ಮೆಸೆಜ್ ಹಾಕಿದ್ರು. ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಕೆಲವ್ರು ಕಾಲ್ ಕೂಡ ಮಾಡಿದ್ರು. ಎಲ್ಲರ ಅಭಿಪ್ರಾಯಗಳನ್ನೂ ತುಂಬು ಮನಸಿನಿಂದ ಗೌರವಸ್ತೀನಿ...
-ವಿಶ್ವಾಸ್ ಭಾರದ್ವಾಜ್

No comments:

Post a Comment