Saturday 22 November 2014

ನಮ್ ಕಡೆ ಬೈಗುಳ ಹೀಗೆ!

"ನಮ್ಮೂರಿನ ಬೈಗುಳ ಹೀಗ್ ಹೀಗೆ..."
"ಹೌದಾ ನಮ್ಮೂರಲ್ಲಿ ಹೀಗೆ ಬಯ್ತಾರೆ.."
"ಓಹ್! ನಮ್ ಕಡೆ ಬೈಗುಳ ಹೀಗಿರುತ್ತೆ.."

ಅಸಭ್ಯವಲ್ಲದ ಬೈಗುಳಗಳ ಸಂಸ್ಕ್ರತಿ ನೆನಪು ಮಾಡಿಕೊಂಡೆವು ಮೊನ್ನೆ ಭಾನುವಾರದ ನ್ಯೂಸ್ ಡೆಸ್ಕ್ನ ವಿರಾಮದಲ್ಲಿ, ನಾನು, ಪ್ರಶಾಂತ್, ತ್ರಿವೇಣಿ..
ಬ್ಯಾವರ್ಸಿ ಅನ್ನೂ ಬೈಗುಳದ ಬಗ್ಗೆ ತುಳುನಾಡಿನಲ್ಲಿ ಇರೋ ಮಹತ್ವದ ಬಗ್ಗೆ ಕೊಂಚ ಚರ್ಚೆ ಆಯ್ತು..
ಮುಂಡೇಕುರ್ದೆ, ನಿನ್ ಹೊಂಡಕ್ ಹಾಕ, ನಿನ್ ಹುಲಿ ಹಿಡಿಯಾ ಮುಂತಾದ ಮಲೆನಾಡಿನ ಆಗುಂಬೆ ಸೀಮೆಯ ಬೈಗುಳಗಳ ಬಗ್ಗೆ ಹೇಳ್ಕಂಡು ನಕ್ವಿ...
ಆದ್ರೆ ಮತ್ತೆ ಗ್ರೇಟ್ ಬೈಗುಳ ಅನ್ನೋ ಸ್ಥಾನ ಸಿಕ್ಕಿದ್ದು ಮಾತ್ರ ಸುನಿಲ್ ಶಿರಸಂಗಿ ಸರ್ ಒಂದ್ ಸಲ ನಂಗೆ ಬಯ್ದಿದ್ದ "ಹೋಗಿ ಎಲ್ಲಾರೂ ಉಪ್ಪಿನಕಾಯಿ ಜಾಡಿ ಮಾರಿ ಬರ್ರಿ" ಅನ್ನೋ ಪರಮಾರ್ಥಿಕ ಬೈಗುಳಕ್ಕೆ
(ದನ ಮೇಯ್ಸಕ್ಕೆ ಹೋಗು, ಕತ್ತೆ ಕಾಯಕ್ಕೆ ಹೋಗು ಅಂತ ಸುನಿಲ್ ಸರ್ ಬಯ್ದಿದ್ರೆ ಹೆಚ್ಚು ಫೀಲ್ ಆಗ್ತಿರಲಿಲ್ಲ ಆದ್ರೆ ಉಪ್ಪಿನಕಾಯಿ ಮಾರಿ ಬಾ ಹೋಗು ಅಂದಿದ್ದು ಮಾತ್ರ,, ಅಬ್ಬಬ್ಬಾ ಸಿಕ್ಕಾಪಟ್ಟೆ ಅವಮಾನ ಆಗಿಬಿಡ್ತು..)

ಉಪ್ಪಿನಕಾಯಿ ಮಾರಿ ಬಾ ಹೋಗು ಅಂತ ಡಿಫರೆಂಟ್ ಆಗಿ ಬಯ್ದ ಸುನಿಲ್ ಸರ್ಗೆ ಕೃತಜ್ಞತೆಯಿಂದ ಈ ಸಾಲುಗಳ ಅರ್ಪಣೆ..
-ವಿಶ್ವಾಸ್ ಭಾರದ್ವಾಜ್

No comments:

Post a Comment